Sunday 16 April 2017

ಅಂತರ

EXT.DAY  AT THE DOOR(Entrance)

ವೀರೇಶ(28)  ಬ್ಯಾಗ್ ಅನ್ನು ತನ್ನ ಹೆಗಲ ಮೇಲೆ ಹೇರಿಸಿಕೊಂಡು ಆಟೋ ಇಂದ ಇಳಿದು ಬಾಗಿಲ ಬಳಿ ಬಂದು ಜೋರಾಗಿ ತಟ್ಟುತ್ತಾನೆ ಬಹಳ ಹೊತ್ತು ತಟ್ಟಿದ ನಂತರ ವಯಸ್ಸಾದ ಕನ್ನಡಕ ಹಾಕಿಕೊಂಡು, ಬಾಯಲ್ಲಿ ಎಲೆ ಅಡಿಕೆ ಜಗೀತಾ ಇರೋ ವೀರೇಶನ ತಂದೆ ಬಂದು ಬಾಗಿಲು ತೆರೆಯುತ್ತಾರೆ, ಒಂದು ಗಳಿಗೆ ಏನು ಮಾತಾಡದೆ  ಕನ್ನಡಕ ಏರಿಸಿಕೊಂಡು ಹಾಗೆ ವೀರೇಶನನ್ನ ನೋಡೋ ಅವನ ತಂದೆ  ಸ್ವಲ್ಪ ಹೊತ್ತು ಆದಮೇಲೆ ಏನೋ ಗೊತ್ತಾದವರ ತರಾ "ಓಹೋ !!!" ಎಂಬ ಉದ್ಗಾರ ಕೊಟ್ಟು ಬೆನ್ನು ತಿರುಗಿಸಿಕೊಂಡು ಒಳಗೆ ನಡೀತಾರೆ, ಅವರನ್ನ ನೋಡುತ ಸೊಟ್ಟು ಮುಖದಿಂದ ಅಲ್ಲೆ ವೀರೇಶ ನಿಲ್ಲುತ್ತಾನೆ..
                                                                                                                                   [CUT.TO]


INT. TV ROOM(Hall). MOMENTS LATER

ಗೌಡ್ರು (65, ವೀರೇಶನ ತಂದೆ)  ಚೇರ್ ಮೇಲೆ ಬಂದು ಕೂತು ಬಾಯಲ್ಲಿ ಇದ್ದ ಎಲೆ ಅಡಿಕೆ ಅನ್ನು ಒಂದು bowl ಅಲ್ಲಿ ಉಗಿದು, ಬಟ್ಟೆ ಇಂದ ತಮ್ಮ ಬಾಯಿ ಒರೆಸು ಕೊಳ್ಳುತ್ತಾರೆ..

                                                           ಗೌಡ್ರು
ಏಯ್ ಅದು ಏನ್ ಸ್ನಾನ ಮಾಡ್ತಿ ನಿನ್ ಮಗ  ಬಂದವ್ನೆ ನೋಡು ಬಾ ಇಲ್ಲಿ!!! ಗುರತೆ ಹಿಡಿಯೋಕೆ ಆಗೋಲ್ಲ ಎಲ್ಲ ಕಡೆ ಗಡ್ಡ ಬೆಳೆಸ್ಕೊಂಡ್ ಐತೆ ಬಡ್ಡೆತಾವನ್ ತಂದು....... ಇವಾಗೇನು ಅಂತದ್ದು  ಗುಡ್ಡೆ ಹಾಕೋಕೆ ಬಂದವನೋ!!!

                                                            ಅವ್ವ(V.O)
                                                   ಬಂದೆ ಬಂದೆ ಹತ್ತು ನಿಮಿಷ !!!

ರೂಮಿಂದ ಸಿಟ್ಟಿಂದ ಎದ್ದು ಬರೋ ವೀರೇಶ ಒಂದು ಸರಿ ಅವರ ಅಪ್ಪನನ್ನ ಗುರಾಯಿಸ್ತಾನೆ


                                                           ವೀರೇಶ
                              ನಾನು ಏನು ನಿನ್ ತವ ಉಗ್ಸ್ಕೊಳೋಕೆ ಬರಲಿಲ್ಲ!!!!ಏನೋ ಪಾಪ accident ಆಗದೆ ನೋಡ್ಕೊಂಡು ಹೋಗೊವಾ ಅಂತ ಬಂದೆ.

                                                             ಗೌಡ್ರು
           ಓಹೋ ಓಹೋ!!! ನಂಗೆ ಎಲ್ಲ ಗೊತ್ತಾಯ್ತದೆ ಕಣ್ಲಾ  ನಾನು ಸತ್ತಿನೊ ಬದುಕಿನೊ ಅಂತ ನೋಡೋಕೆ ಬಂದಿಯಾ!!! ಎಲ್ಲಿ ಆಸ್ತಿ ಇನ್ನೊಬ್ಬರಿಗೆ ಬರಿದುಕೊಡ್ತೀನಿ ಅಂತ ಓಡಿ ಬಂದಿಯಾ ನೀನು......

                                                        ವೀರೇಶ
           ಅಂಬಾನಿ ನೀನು ಅಸ್ತಿ ಮಾಡಿ ಮಡಗಿದಿಯಾ ನಾನು ಹೊತ್ತುಕೊಂಡು ಹೋಗೋಕೆ, ಎರಡು ವರ್ಷ ಆದಮೇಲೆ ಬಂದಿವ್ನಿ ಮನೆಗೆ ಹಿಂಗ ಮಾತಾಡೋದು ನೀನು!!!

ಎದ್ದು ಕೈ ಮುಷ್ಠಿ ಕಟ್ಟಿ  ವೀರೇಶನ ಬಳಿ ಬರುವ ಅವನ ತಂದೆ, ಲುಂಗಿ ಅನ್ನು ಮೇಲಕ್ಕೆ ಏರಿಸಿ ಕೊಂಡು ಅವನ ಹತ್ತಿರ ಬರುತ್ತಾರೆ. ವೀರೇಶ ಹೆದರಿ ಹಿಂದೆ ಸರಿಯುತ್ತಾನೆ..

                                                         ಗೌಡ್ರು
                ನಾನು ಇಲ್ಲೇ ಮಲ್ಲಪ್ಪನ ತಾವ ಹೋಗಿ ಬರ್ತೀನಿ, ತಂಬಾಕು ಕಾಲಿ ಆಗೈತೆ.........
ಹೆದರಿ ಹಿಂದೆ ಸರಿದಿದ್ದ ವೀರೇಶ ತನ್ನ ಶರ್ಟ್ ಸರಿ ಮಾಡಿಕೊಂಡು, ಬ್ಯಾಗ್ ಇಂದ ಒಂದು ಕವರ್ ತೆಗೆದು ತನ್ನ ಕೈ ಅಲ್ಲಿ ಹಿಡ್ಕೋತಾನೆ

                                                     ವೀರೇಶ
                    ನಾನು ಬರ್ತೀನಿ ಇರು ಬಹಳ ದಿನ ಆಯಿತು ಅವನನ್ನ ನೋಡಿ.....

                                                                                                                                                                                                                                                                                                     [CUT TO.]



EXT. ON THE ROAD.SAME TIME

ಗೌಡ್ರು ಮೆಲ್ಲಕ್ಕೆ ರೋಡ್ ಮೇಲೆ ನಡೆದು ಹೋಗ್ತಾ ಇದ್ದರೆ ವೀರೇಶ ಅವರನ್ನು ಹಿಂಬಾಲಿಸಿ ಅವರ ಸರಿಸಮವಾಗಿ ನಡೆಯುತ್ತಾನೆ.......... 

                                                  ಗೌಡ್ರು
ನೀನು ಯಾಕೆ ಬಂದೆ ನನ್ನ ಹಿಂದೆ ನಾನು ಏನು ಯಾರಿಗು ಆಸ್ತಿ ಬರೆದು ಕೊಡೋಕೆ ಹೋಯ್ತಿಲ್ಲ !!!

                                                 ವೀರೇಶ
ನಿಂದು ಒಳ್ಳೆ ಕಥೆ ಆಯಿತು ಮಲ್ಲಪ್ಪ ನೋಡೋಕೆ ಬರ್ತಾ ಇರೋದು. ಅದು ಸರಿ ಅವ್ವ ನಿನಗೆ ಆಕ್ಸಿಡೆಂಟ್ ಆಗೈತೆ ಅಂತು ಫೋನ್ ಅಲ್ಲಿ, ನೋಡಿದರೆ ಮುಖದ ಮೇಲೆ ಎರಡು ಮಾರ್ಕ್ ಬಿಟ್ಟರೆ ಏನು ಕಾಣ್ತಾ ಇಲ್ಲ........ ಏನು ಆಯಿತು?

                                                    ಗೌಡ್ರು
ಶಿವ ಏಟು ಶಕೆ, ಮೊದಲು ನಮ್ಮ ಕಾಲದಲ್ಲಿ ಇಷ್ಟು ಅಯ್ತಿರಲಿಲ್ಲ, ನಿಮ್ಮ ಅಂತ ಮನೆಹಾಳು ನನ್ನ ಮಕ್ಕಳು ಹುಟ್ಟಿದಕ್ಕೆ  ಈಟೊಂದು ದಗೆ ಅಯ್ತಿರೋದು....... ಅವ್ವ ಅಪ್ಪ ಅಂತ ಚೂರು ಆದರು  ಕಾಳಜಿ, ಪ್ರೀತಿ  ಐತೆ ಏನಲಾ ನಿನಗೆ ಏನೋ ಎರಡು ಮಾತು ಅಂದೆ ಅಂತ  ಮನೆ ಬಿಟ್ಟು ಹೋಯ್ತಾ ಇದ್ದೆ...

                                             ವೀರೇಶ
ಅದು ಏನೋ ಕೆಟ್ಟಗಳಿಗೆ ಇವಾಗ ಬಂದಿದೀನಿ ಆಲ್ವಾ.........ಹೋಗಿದ್ದು ಒಳ್ಳೇದು ಆಯಿತು ಇವಾಗ  ಬೆಂಗಳೂರು ಅಲ್ಲಿ ಒಳ್ಳೆ ಕೆಲಸ ನಂದು ತಿಂಗಳಿಗೆ 20,000 ಸಂಬಳ ಬರ್ತದೆ........ಇಲ್ಲಿ ಇದ್ದಿದ್ದರೆ ಏನು ಕಿಸಿದು ದಬ್ಬಾಕಕ್ಕೆ ಅಯ್ತಿರಲಿಲ್ಲ ...... ಆಗೋದು ಎಲ್ಲ ಒಳ್ಳೇದಕ್ಕೆ....

                                                 ಗೌಡ್ರು
ನಾನು ಮಾರನಳ್ಳಿ ಕ್ರಾಸ್ ತಾವ ಗಾಡಿ ನಿಲ್ಸಿ ಸೀಬೆ ಕಾಯಿ ಕಿತ್ತಾ ಇದ್ದೆ ಒಂದು ಕಾಯಿ ರೋಡ್ ಮ್ಯಾಕೆ ಹೂತು ಬಗ್ಗಿ ತಗೊಳ್ತಾ ಇದೀನಿ ಯಾವನೋ ಕಾರ್ ಅಲ್ಲಿ ಜೋರಾಗಿ ಬಂದು ಮುಂದಿಂದ  ಗುದ್ದಿದ ನಾನು ತಕ್ಷಣ ತಲೆ ತೆಗೆದೆ ಆದರೂ ಏಟು ಸ್ವಲ್ಪ ಜೋರಾಗಿ ಬಿತ್ತು...........

                                                ವೀರೇಶ
ಅವ್ವ ಅದು ಏನೋ ಆಪರೇಷನ್ ಮಾಡ್ಸಬೇಕು ಅಂತ ಹೇಳ್ತಿತ್ತು, ಏನು ಆಗದೆ ?

                                                    ಗೌಡ್ರು
Tension ಆ ಅದೆಲ್ಲ ಆಗಕಿಲ್ಲ ನನಗೆ, ದ್ಯಾವರಿಗೆ ಗೊತ್ತದೆ ನನಗೆ ಏನಾದರು ಆದರೆ ನಿಮ್ಮ ಅವ್ವನ ನೋಡ್ಕೊಳೋರು ಯಾರು ಇಲ್ಲ ಅಂತ, ಅದುಕ್ಕೆ ಉಳ್ಸವ್ನೆ ನನ್ನ, ನಿಂಗೇನು ಗೊತ್ತಲಾ ಶಟ್ಕೊಂಡು ಊರು ಬಿಟ್ಟು ಹೋದೆ ನಿಮ್ಮವ್ವ ನಿನ್ನ ನೆನಸ್ಕೊಂಡು ಅಳದೆ ಇರೋ ದಿನಗಳು ಇಲ್ಲ...........

                                                    ವೀರೇಶ
                              ನಾನು ಏನೋ ಕೇಳ್ತಾ ಇದೀನಿ ನೀನು ಏ....

ವೀರೇಶನ ಮಾತು ಕೇಳದೆ ಹಾಗೆ ಮುಂದೆ ನಡೆಯುವ ಅವನ ತಂದೆ ಹೋಗಿ ಮಲ್ಲಪ್ಪನ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಳ್ಳುತ್ತಾರೆ.... ವೀರೇಶ ಸಣ್ಣ ಮುಖ ಮಾಡಿ ಮುಂದೆ ನಡೆಯುತ್ತಾನೆ...

                                                         ಮಲ್ಲಪ್ಪ
                       ಏನ್ರೀ ಗೌಡ್ರೆ ಏನ್ ಸಮಾಚಾರ ಒಂದು ಪಾನ್ ಕಟ್ಟೋಣು ಏನು?

                                                        ಗೌಡ್ರು
                    ಎರಡು ಮಧು ಕೊಡು ಹಂಗೆ ಒಂದು ಪಾನ್ ಕಟ್ಟು ಸುಣ್ಣ ಕಡಿಮೆ ಹಾಕಿ

                                                        ಮಲ್ಲಪ್ಪ(ವೀರೇಶನನ್ನ ನೋಡಿ)
ಯವ್ವಿ ಯವ್ವಿ ಏನು ಗೌಡ್ರೆ ಯಾರ್ ಇದ, ಏನಲೇ  ಬಾಡ್ಯಾ ಇವಾಗ ನೆನಪಿಗ ಬಂತ ಈ ಊರ, ಎಲ್ಲ ಹೋಗಿದ್ದಿ?ಏನ್ ಮಾಡಿದಿ?

                                                           ವೀರೇಶ
                ಅದೆಲ್ಲ ದೊಡ್ದು ಕಥೆ ಬಿಡು ಮಲ್ಲಪ್ಪ ಅದು ನಿನಗೆ ಆಮೇಲೆ ಹೇಳ್ತಿನಿ.......

ಅಂಗಡಿ ಒಳಗೆ ಹೋಗೋ ವೀರೇಶ ಮಲ್ಲಪ್ಪ ಕೀವಿ ಅಲ್ಲಿ ಪಿಸುಗುಡುತ್ತಾನೆ....

                                                          ವೀರೇಶ
ನಾನು ಹೋಗ್ತಾ ಅವಳಿಗೆ ಹೇಳಿ ಹೋಗಿದ್ದೆ ಆದಷ್ಟು ಬೇಗ ಬಂದು ನಿನ್ನ ಮದುವೆ ಆಗ್ತೀನಿ ಅಂತ.......ಅವಳಿಗೆ ಅಂತ  ರೇಷ್ಮೆ  ಸೀರೆ ತಂದಿದೀನಿ ಅವಳು ಇವಾಗ ಇಲ್ಲೇ ಇದಾಳ ಹಳ್ಳಿ ಅಲ್ಲಿ ಇದಾಳ?......

                                                         ಮಲ್ಲಪ್ಪ
ಅಯ್ಯೋ ದಡ್ಡ ನಿನಗ ಆವಾಗಲೇ ನಾ ಹೇಳಿದ್ದೆ ಅವಳು ನಿನ್ನ ಜೊತೆ ಆಟ ಆಡಾಕತ್ತಾಳ, ಹುಡುಗೀರಿಗೆ ನೀವೆಲ್ಲ ದವಾಖಾನೆಯಾಗ್ ಕೊಡೊ ಮಾತ್ರೆ ಇದ್ದಂಗ ಜ್ವರ ಬಂದಾಗ ಮಾತ್ರ ತೊಗೋತಾರ ಬ್ಯಾಡಾದಾಗ ಮೂಲೆಗ ವೊಸಿತಾರ...

                                                          ವೀರೇಶ
                                               ಇವಾಗ ಆವ್ಳು ಎಲ್ಲಿ ಅವಳೆ?

                                                           ಮಲ್ಲಪ್ಪ
                    ಆ!!! ಆಗೋ ಅಲ್ಲಿ ನಿನಗ ಒಬ್ಬಳು ಮುದುಕಿ ಕಾಣಾಕತ್ತಾಳೇನು....
                   
                                                          ವೀರೇಶ
                                                            ಹಾ!
                                                        ಮಲ್ಲಪ್ಪ
             ಅಕಿ ಕೈ ಆಗ ಇರೋ ಒಂದು ವರ್ಷದ ಮಗು ನಿಮ್ಮ ಹುಡಿಗಿದ್.......ಆ ಮುದುಕಿ ಅವಳ ಅತ್ತಿ......ಭೂಮಿ ಸುತ್ತತೈತೋ ಸುತ್ತತೈತಿ ಎರಡು ವರ್ಷ ಹಿಂದೆ ಇದ್ದ ಊರು ಇವಾಗ ಇಲ್ಲ.....

ವೀರೇಶನ ತಂದೆ ಕಟ್ಟೆಯಿಂದ ಎದ್ದು ಪಾನ್ ಕಟ್ಟಿಸಿಕೊಳ್ಳೋಕೆ ಬರುತ್ತಾರೆ ವೀರೇಶ ಬೇಸರ ಇಂದ ಕೂತಿರುವುದನ್ನ ನೋಡಿ ಆಶ್ಚರ್ಯ ಪಡುತ್ತಾರೆ , ಮಲ್ಲಪ್ಪ ಪಾನ್ ಕಟ್ಟಲು ಶುರು ಮಾಡುತ್ತಾನೆ.....

                                                    ಮಲ್ಲಪ್ಪ
ಗೌಡ್ರೆ ಮಗಂಗೆ ಲಗೂನೆ ಒಂದು ಹುಡುಗಿ ನೋಡಿ ಮದುವೆ ಮಾಡ್ರಲ್ಲ, ನೋಡ್ರಿ ತಕ್ಕಡಿ ಇಲ್ಲದೆ ವ್ಯಾಪಾರ ಹೆಣ್ಣಮಗಳು ಇಲ್ಲದೆ ಸಂಸಾರ ಎರಡು ಆಗಾಕಿಲ್ಲ....,....

                                                   ಗೌಡ್ರು
                                ಸ್ವಲ್ಪ ಉದ್ದ ಆಯಿತು ಕಟ್ಟು ಮಾಡು........

                                                   ಮಲ್ಲಪ್ಪ
                                                    ಏನಾ?
     
                                                   ಅಪ್ಪ(ಗೌಡ್ರು)
                                   ಎಲೆ ಸ್ವಲ್ಪ ಉದ್ದ ಆಯಿತು ಕಟ್ ಮಾಡು!!!

 ಪಾನ್ ಹಾಕಿಕೊಂಡು ವೀರೇಶನ ತಂದೆ ಮನೆಯ ದಾರಿ ಹಿಡಿಯುತ್ತಾರೆ , ಅಂಗಡಿ ಅಲ್ಲೇ ಕೂತಿದ್ದ ವೀರೇಶ ಎದ್ದು ಹೊರಡೋ ಆಲೋಚನೆ ಮಾಡುತ್ತಾನೆ
                                                     ಮಲ್ಲಪ್ಪ
         ಲೇ ಈ ಕವರ್ ತಗೊಂಡು ಹೋಗು ನನ್ನ ಹೆಂಡರ ಏನಾದರು ಬಂದರೆ ಮುಗಿತು ಉಳಿಯೋಲ್ಲ ಸೀರಿ.
                                                   
                                                      ವೀರೇಶ
                                                     (ಬೇಸರ ದಿಂದ)
                                                     ತಗೊಳ್ಳಿ ಬಿಡು..
                 
                                                    ಮಲ್ಲಪ್ಪ
ಲೇ ನಿಮ್ಮ ಅವ್ವನಿಗೆ ತಗೊಂಡು ಹೋಗಿ ಆದರು ಕೊಡು, ಅಪ್ಪ ಅವ್ವನಿಗೋಸ್ಕರ ಬದಕಲೆ, ನೀನು ಕೊಲೆ ಮಾಡಿದರೆ ಕೊಲೆಗಾರ, ಕಳ್ಳತನ ಮಾಡಿದರೆ ಕಳ್ಳ, ದುಡ್ಡು ಮಾಡಿದರೆ ಶ್ರೀಮಂತ ಆದರೆ ನಿಮ್ಮ ಅಪ್ಪ--ಅವ್ವನಿಗೆ ಯಾವಾಗಲು ನೀನು ಮಗ ಅದು ಮರೀಬೇಡ........

ಸ್ವಲ್ಪ ಹೊತ್ತು ಅಲ್ಲೆ ಹಾಗೆ ಪಾನು ಕಟ್ಟುತಿರುವ ಮಲ್ಲಪ್ಪ ಅನ್ನು ನೋಡುವ ವೀರೇಶ ಅಂಗಡಿ ಒಳಗೆ ಬಂದು ಕವರ್ ತಗೊಂಡು ಓಡುತ್ತಾನೆ..............ಮಲ್ಲಪ್ಪ ಅವನನ್ನ ನೋಡುತ್ತಾ ಹೆಮ್ಮೆ ಇಂದ ಮುಗುಳ್ ನಗುತ್ತಾನೆ....



                                                                                                                                                                                                                                                                                                        [CUT TO:]

EXT. ON THE ROAD(BACK TO HOME)

ಮುಂದೆ ಮೆಲ್ಲಗೆ ನಡೆದು ಹೋಗುತ್ತಿರುವ ವೀರೇಶನ ಅಪ್ಪ, ಹಿಂದೆ ಇಂದ ಓಡಿ ಬರುವ ವೀರೇಶ  ಅಪ್ಪನ ಕೈ ಹಿಡಿದು ಕೊಳ್ಳುತ್ತಾನೆ, ಜೋರಾಗಿ ಸ್ವಲ್ಪ ಹೊತ್ತು ಉಸಿರಾಡಿ. . . . . . . . . .

                                                                ವೀರೇಶ
ಅಪ್ಪಯ್ಯ!!! ನಿಂತ್ಕೋ, ಇನ್ನು ನೀನು ನನ್ನ ಈ ತರ ಜೊತೆ ಬರೋಲ್ಲ ಅಂತ ಬಿಟ್ಟು ಮುಂದೆ ಹೋಗ್ಬೇಡ, ತಪ್ಪ ಆಯಿತು ನಂದು ತಪ್ಪ ಆಯಿತು!!!

                                                                    ಗೌಡ್ರು
                                                           ಏನಲಾ ನಿಂದು ಬಾದೆ?

                                                                       ವೀರೇಶ
ನಿಂಗೆ ನೆನಪು ಇದೇನಾ ಅಪ್ಪಯ್ಯ, ಒಂದು ಸರಿ ಚಿನ್ನಪ್ಪ ಸಾರ್ ನಂಗೆ ಶಾಲೆ ಅಲ್ಲಿ ಹೊಡೆದಾಗ, ನೀನು ಬಂದು "ನನ್ನ ಮಗಿಗೆ ಹೊಡಿದರೆ ನಾನು ಹೊಡಿಬೇಕು ಬೈದರೆ ನಾನು ಬೈ ಬೇಕು, ನೀನ್ ಯಾವನ್ಲಾ ದೊಣ್ಣೆ ನಾಯಕ!!!" ಅಂತ ದಬಾಯಿಸಿದ್ದೆ.........ನಾನೆ ನಿನ್ನ ಅರ್ಥ ಮಾಡ್ಕಳಿಲ್ಲ ದಡ್ಡ ನಾನು, ಇವಾಗ......!!!!


ಹಿಂದೆ ಇಂದ ಬರುವ ವೀರೇಶನ ಹಳೆಯ ಸ್ನೇಹಿತ ಬೋರ(28), ಬಂದು ವೀರೇಶನನ್ನ ಆಶ್ಚರ್ಯದಿಂದ ನೋಡುತ್ತಾನೆ ವೀರೇಶ ಅವನ ಮಾತನ್ನು ನಿಲ್ಲಿಸಿ ಅಪ್ಪನ ಕೈ ಬಿಟ್ಟು ಬೋರನನ್ನು ಅಪ್ಪಿಕೊಳ್ಳುತ್ತಾನೆ ..........ಅವರಿಬ್ಬರು ಮಾತಾಡುವುದ್ದನ್ನು ನೋಡಿ ಅಪ್ಪ ಮುಂದೆ ಮನೆಗೆ ನಡೀತಾರೆ......ಇಬ್ಬರು ಹಾಗೆ ಮಾತಾಡುತ ಮುಂದೆ ನಡೀತಾರೆ....

                                                                 ಬೋರಾ
                                   ಮತ್ತೆ ಏನಲಾ ಬೆಂಗ್ಳೂರಾಗೆ ಏನ್ ಮಾಡ್ದೆ ಎಲ್ಲಿ ಇದ್ದೆ!!!

                                                                  ವೀರೇಶ
                                       ಅದೆಲ್ಲ ದೊಡ್ಡ ಕಥೆ ಸಂಜೆ ಸಿಗು ಹೇಳ್ತೀನಿ, ಮನೆಯಲ್ಲಿ ಎಲ್ಲ ಚನಾಗ್ವರಾ?

                                                                 ಬೋರಾ
ಹೂ!!! ಅದು ಸರಿ ನಿಮ್ಮ ಅಪ್ಪಯ್ಯನಿಗೆ ಏನೋ ಹೇಳ್ತಾ ಇದ್ದೆ ಕಿವಿ ಕೇಳಿಸುತ್ತೋ ಇಲ್ವೋ ಅಂತ ನೀನು ಒಂದು ಸರಿ ನೋಡ್ತಾ ಇದ್ದೀಯಾ

                                                                ವೀರೇಶ
                                                   ಅಂದರೆ ನಮ್ಮಪ್ಪಂಗೆ ಕಿವಿ......!!!!

                                                                                                                             [CUT TO:]

INT. IN THE HOME(Hall)

ಚೇರ್ ಮೇಲೆ ಕೂತು ತೆರೆದಿರುವ ಬಾಗಿಲ ಆಚೆ ಇರುವ ಗೇಟ್ ಅನ್ನು ನೋಡುತ್ತಿರುವ ಗೌಡ್ರು, ಯೋಚನೆ ಅಲ್ಲಿ ಮುಳಗಿರುತ್ತಾರೆ

                                                           ಅವ್ವ
                                          ಎಲ್ಲಿ ವೀರೇಶ(ಕೈ ಸನ್ನೆ ಮಾಡುತ್ತ)?

                                                        ಅಪ್ಪ
                                                (In High Pitch Voice)
                                ಅವನು ಬೋರನ ಜೊತೆ ಮಾತಾಡ್ತಾ ಬರ್ತವ್ನೆ ಇಲ್ಲೆ ಅವನೆ!!!

                                                       ಅಮ್ಮ
                             ಏನಂದಾ ಮಗ ಬಂದು ತಕ್ಷಣ ನೀವು ಅವನಿಗೆ ಬೈಯೋದಾ!!!

                                                        ಅಪ್ಪ
                       ಇವಾಗ ಬರ್ತಾ ಬಂದು ನನ್ನ ಕೈ ಹಿಡ್ಕೊಂಡ ಏನೋ ಹೇಳ್ದ ಆದರೆ ನನಗೆ ಎಲ್ಲಿ ಗೊತ್ತಾಗ್ಬೇಕು....ಏನು ಹೇಳಿದನೋ ಗೊತ್ತಿಲ್ಲ ಆದರೆ ಅವನು ಆ ತರ ನನ್ನ ಜೊತೆ ಯಾವತ್ತೂ ಮಾತಾಡಿಲ್ಲ.......


EXT. ON THE ROAD

ವೀರೇಶ ಬೋರಾ ನಡೀತಾ ಮನೆ ಮುಂದೆ ಬಂದು ನಿಲ್ಲುತ್ತಾರೆ.......

                                                   ಬೋರಾ
 ನೀನು ಹೇಳಿದ್ದು ನಿಮ್ಮ ಅಪ್ಪಂಗೆ  ಏನು  ಗೊತ್ತಾಗಿರೋಲ್ಲ!!! ಮೊದಲು ಅದು ಯಾವುದೊ machine ತಂದು ಕೊಡು ನಿಮ್ಮ ಅಪ್ಪಯ್ಯನಿಗೆ......ಬಹಳ ತಡ ಮಾಡಿದರೆ ಒಳ್ಳೇದು ಅಲ್ಲ.......

ವೀರೇಶ ಗೇಟ್ ಬಳಿ ನಿಂತಿರೋದನ್ನ ಒಳಗೆ ಇದ್ದ ಅಪ್ಪ-ಅಮ್ಮ ಇಬ್ಬರು ನೋಡುತ್ತಾರೆ, ಅಮ್ಮ ಖುಷಿ ಇಂದ ಹೋರ ನಡಿಯುತ್ತಾರೆ......
                                                           ಅವ್ವ
                                           (ಸೆರಗಿಂದ ತನ್ನ ಕಣ್ಣು ಒರೆಸುಕೊಳ್ಳುತ್ತ)
ಏಟು ಉದ್ದ ಬೆಳದೀಯಾ, ಏಯ್ ಈ ಗಡ್ಡ ಮೊದಲು ತೇಗಿ ಚೆನ್ನಾಗಿ ಕಾಣಾಕಿಲ್ಲ ನಿನಗೆ, ತಡಿ ಇಲ್ಲೇ ಇರು ಶ್ಯಾಮಕ್ಕ, ಮುನಿಯಮ್ಮ ಕರ್ಕೊಂಡು ಬರ್ತೀನಿ ಅವರು ನಿನ್ನ ನೋಡ್ಬೇಕು ಅಂತ ಇದ್ದರು  

ಆದರೆ ವೀರೇಶ ಚೇರ್ ಮೇಲೆ ಕೂತಿರುವ ಅವನ ಅಪ್ಪನನ್ನೇ ನೋಡುತ್ತಿರುತ್ತಾನೆ....ಒಂದು ಗಳಿಗೆ ನೋಡಿದರು ನೋಡದೆ ಇರೋ ಹಾಗೆ ಮುಖ ಆಕಡೆ ತಿರುಗಿಸುವ ಗೌಡ್ರು ನಂತರ ವೀರೇಶನ ಕಡೆಗೆ ಮತ್ತೆ ನೋಡಿದಾಗ ಅವನು ಇನ್ನು ಅವರನ್ನೇ ನೋಡುತ್ತಿರುತ್ತಾನೆ, ಅವರು ಇನೊಮ್ಮೆ ಮತ್ತೆ ಆ ಕಡೆ ತಿರುಗಿ ಇವನ ಬಳಿ ನೋಡಿದಾಗ ಅವನು ಬೋರನ ಜೊತೆ ಮಾತಾಡುತ್ತ ಇನ್ನು ಇವರ ಬಳಿಯೇ ಗಮನ ಇಟ್ಟಿರುತ್ತಾನೆ,  ಗೌಡ್ರು ಕೊನೆಗೆ ಕಣ್ಣು ತುಂಬಾ ಅವನನ್ನು ಒಮ್ಮೆ ನೋಡಿ ಮನ ತುಂಬಿ ಮುಗುಳ್ ನಗುತ್ತಾರೆ, ಅವರನ್ನ ನೋಡುತ ವೀರೇಶನು ನಗುತ್ತಾನೆ................

                                                    ವೀರೇಶ
      ಮಾತಿಗೆ ಕಿವಿ ಬೇಕು ಪ್ರೀತಿಗೆ ಮನಸ್ಸು ಸಾಕು, ಇಲ್ಲ ಬೋರಾ ನಾನು ಹೇಳಿದ್ದು ಅಪ್ಪಯ್ಯನಿಗೆ ಎಲ್ಲ ಕೇಳಿಸಿದೆ!!!ಅವರಿಗೆ ಅನಿಸಿದೆ ತನ್ನ ಮಗ ಇರಬೇಕಾದ ಸಮಯದಲ್ಲಿ ಜೊತೆಗೆ ಇದಾನೆ.
[Close up on veeresh fathers  smiling face]

FADE OUT.
CREDITS.
END.






                                                             
     









                                                           



           








                                                     

   



                               

                                                               



                                                 








   

Friday 29 April 2016

PEARL





A drop of the rain falling on her cheek forms a dew
i could see their a Pearl.
A cold breeze that blows her hair
My Heart started to whirl.
She rush to dance in the rain
who seemed like an fountain

A tiny bag hanging on her hand
Swirling all over.
Tightly Embraced her hair band
Trying to jump with her.
My shirt button was open 
She stepped Inside, Making my heart her own.


 Loving, Caring being with parents
 always a complete daughter.
Teasing, enjoying hanging with her friends
always bringing around laughter.
All she was Beauty with the mind,
One day she might be mine or Someone's,
 Once i wanted to hold her hand. 

 I could imagine a darkest night
Standing by the river side,
A Sailing boat reaches the shore
Someone steps out dressed like Bride,
Holding the lamp tending towards to me
there she comes my girl,
Background is dark and in the lamp light when i see only her face
i could see their a Pearl.

Monday 28 March 2016

Flush



         
         


                "ಅರುಣ್!ಅರುಣ್!  ನಿನಗೆ ಎಷ್ಟು ಸರಿ ಹೇಳಿದೀನಿ!!!Toiletಗೆ ಹೋಗಿ ಬಂದ ಮೇಲೆ Flush ಮಾಡು ಅಂತ ಹಾಗೆ ಬರ್ತಿ ಅಲ್ಲ  ನಾಲ್ಕನೆ ಕ್ಲಾಸ್ ನಿನೀಗ ಇದು ನೀನು ನಾಲ್ಕನೆ ಸರಿ ಹೀಗೆ ಮಾಡ್ತಾ ಇರೋದು, ಹೋಗು ಬೇಗ ರೆಡಿ ಆಗು ಸ್ಕೂಲ್ಗೆ"

   "ಮಾತಾಜಿ , ಮೊದಲು ಇದ್ದ toilet ಚೆನ್ನಾಗಿ ಇತ್ತು ಈ ಹೊಸ toilet ಅಲ್ಲಿ ಕೂತು ಮಾಡೂದು ಕಷ್ಟ ಆಗುತ್ತೆ"
"Comod ಅಂತ ಕರಿತಾರೆ ಅದುಕ್ಕೆ ನೀವೆಲ್ಲ ಆರಾಮಾಗಿ ಇರಲಿ ಅಂತ infosys ಅವರು donation ಕೊಟ್ಟು ಒಳ್ಳೆ ಬಟ್ಟೆ, ಊಟ, bed ಎಲ್ಲ ಕೊಟ್ಟಿದಾರೆ, ನಿನಗೇನೂ ಗೊತ್ತು ಅನಾಥ ಆಶ್ರಮ ನಡಿಸೋದು ಎಷ್ಟು ಕಷ್ಟ ಅಂತ, ಬರಿ ಗಲೀಜು ಮಾಡೋದು ಗೊತ್ತು"
"ಹೋಗು ಬೇಗ ಸ್ಕೂಲ್ ಗೆ late ಆಯ್ತು"

ರಾತ್ರಿ ಸುಮಾರು ಎಂಟು  ಗಂಟೆ

Watchmen(ಗುಂಡಣ್ಣ): "ಅಮ್ಮ tuitionಗೆ ಹೋಗಿದ್ದ ಆ ಮಕ್ಕಳೆಲ್ಲ ಬಂದರಾ, ಗೇಟ್ ಬೀಗ ಹಾಕ್ಲ?"

"ಒಂದು ನಿಮಿಷ ತಡಿ ನೋಡ್ತೀನಿ"
"ಮಕ್ಕಳೆ ಎಲ್ಲರೂ ಬಂದಿದಾರಲ್ಲ"
"ಮಾತಾಜಿ , ಅರುಣ್ ಇನ್ನ ಶಾಲೆ ಇಂದ ಬಂದೆ ಇಲ್ಲ"
"ಏನು!!!, ರಾಮ ರಾಮ ಈ ಹುಡುಗ ಇನ್ನು ಎಷ್ಟು ಕಾಟ ಕೊಡ್ತಾನಪ್ಪ!!!"
"ಗುಂಡಣ್ಣ ಬಾಗಲು ಹಾಕಬೇಡ, ಹೋಗಿ ಶಾಲೆ ಹತ್ತಿರ ಸುತ್ತ ಮುತ್ತ ಅರುಣ್ ಹುಡುಕಿ ಕರ್ಕೊಂಡು ಬಾ, ಅವನು ಬರಲಿ ಇದೆ ಅವನಿಗೆ ಇವತ್ತು!!!"

ಗುಂಡಣ್ಣ ೧೦ ಗಂಟೆಗೆ ಸುಮಾರು ಎಲ್ಲ ಕಡೆ ಹುಡುಕಿ ವಾಪಸ್ಸು ಬರ್ತಾನೆ. 

"ಅಮ್ಮ ಎಲ್ಲ ಕಡೆ ಹುಡುಕಿದೆ,ವಿಚಾರಿಸಿದೆ ಎಲ್ಲು ಸಿಗಲಿಲ್ಲ, ಏನು ಮಾಡೋದು ಇವಾಗ"

"ನಾಳೆ ಬೆಳಿಗ್ಗೆ ತನಕ ನೋಡೋಣ ಬರಲಿಲ್ಲ ಅಂದರೆ ಬೆಳಿಗ್ಗೆ ಹೋಗಿ ಪೋಲಿಸ್ complaint ಕೊಟ್ಟರೆ ಆಯಿತು, ಎಷ್ಟೇ ಆದರು ಅನಾಥ ಅವನ ಬಗ್ಗೆ ತಲೆ ಕೆಡಸಿ ಕೊಳ್ಳೋರು ಯಾರು ಇದಾರೆ"

"ಮತ್ತೆ ನಿಮ್ಮ ಕಣ್ಣಲಿ ನೀರು ಯಾಕೆ ತುಂಬಿಕೊಂಡಿದೆ?"

"ಏನು ಇಲ್ಲ ಹೋಗಿ ನೀನು ಮಲಗು ನಾಳೆ ನೋಡೋಣ"

   ನೀರು ಇರಲೇ ಬೇಕು ಕರಳಿನ ಸಂಕಟ ಇನ್ನೊಬ್ಬರಿಗೆ ಹೇಗೆ ಗೊತ್ತಾಗುತ್ತೆ , ಅವನು ತುಂಟ, ತರಲೆ ಆದರೆ ಅವನಲ್ಲಿ ಒಂದು ಮುಗ್ದತೆ ಇತ್ತು ನನ್ನ ಮೇಲೆ ಪ್ರೀತಿ ಇತ್ತು, ನಾನು ಈ ಆಶ್ರಮಕ್ಕೆ ಬಂದು ವೈದೇಹಿ ಇಂದ ಮಾತಾಜಿ ಆಗಿ ೫ ವರ್ಷ ಆಗಿದೆ, ನಾನು ಬಂದಾಗ ೨೦ ಹುಡುಗರು ಇದ್ದರು ಇವಾಗ ೧೫, ಮುಂಚೆ ಇದ್ದವರೆಲ್ಲ ಬೇರೆ ಕಡೆ ನೆಲೆ ಕಂಡಿಕೊಂಡರು ಅದರಲ್ಲಿ ಉಳಿದವನು ಅರುಣ್ ಮಾತ್ರ ಇವಾಗ ಇರೋ ೧೫ ಹುಡುಗರು ಎಲ್ಲರೂ ಹೊಸಬರು ಅರುಣ್ ಒಬ್ಬನನ್ನು ಬಿಟ್ಟು, ಅವನು ಬಂದಾಗ ೪ ವರ್ಷದ ಮಗು ಅವನನ್ನು ನಾನು ಎಲ್ಲ ಮಕ್ಕಳಿಗಿಂತ ಜಾಸ್ತಿ ಕಾಳಜಿ ತೋರಸ್ತ ಇದ್ದೆ, ಅವನನ್ನು ನೋಡಿದಾಗ  ನಾನು ಕಳೆದುಕೊಂಡ ನನ್ನ ಮಗುವಿನ ನೆನಪು ಆಗೋದು.   

  ರಾತ್ರಿ ಸುಮಾರು ೧೨ ಗಂಟೆ 
(ಫೋನ್ ರಿಂಗ್ ಆಗುತ್ತೆ)
"ಹಲೋ ಇದು ಶ್ರೀ ಕೃಷ್ಣ ಅನಾಥ ಅಶ್ರಮಾನಾ?"
"ಹೌದು ಯಾರು ನೀವು ಇಷ್ಟು ಹೊತ್ತಲ್ಲಿ ಫೋನ್ ಮಾಡಿದ್ದು?"
"ನಾವು ಇಲ್ಲಿ ಬಸವನಗುಡಿ ಪೋಲಿಸ್ ಸ್ಟೇಷನ್ ಇಂದ ಮಾತಾಡ್ತಾ ಇರೋದು, ನಿಮ್ಮ ಆಶ್ರಮದ ಒಬ್ಬ ಹುಡುಗ ನಮಗೆ ಸಿಕ್ಕಿದಾನೆ ಬಂದು ಕರ್ಕೊಂಡು ಹೋಗಿ"

      ನಾನು ಗುಂಡಣ್ಣ ತಕ್ಷಣ ಹೊರಟ್ವಿ, ಪೋಲಿಸ್ ಸ್ಟೇಷನ್ ಗೆ  ಹೋದಾಗ ಅರುಣ್ ಬಹಳ ಹೆದರಿಕೊಂಡು ಒಂದು ಮೂಲೆ ಅಲ್ಲಿ ಕೂತಿದ್ದ ನನ್ನ ನೋಡಿ ಓಡಿ ಬಂದು ತಬ್ಬಿಕೊಂಡ,
head constable ನನ್ನ ಹತ್ತಿರ ಬಂದು "ಅಮ್ಮ ಇವನು ಯಾರಿಂದಾನೋ ತಪ್ಪಿಸಿಕೊಂಡು ಓಡಿ ಹೋಗ್ತಾ ಇದ್ದ ನಾವು ನೋಡಿ ಇವನನ್ನ ತಡದು ಇಲ್ಲಿಗೆ ಕರ್ಕೊಂಡು ಬಂದ್ವಿ, ಬಹಳ ಹೆದರಿಕೊಂಡಿದಾನೆ ಕರ್ಕೊಂಡು ಹೋಗಿ, ನನಗೆ ಅನಿಸುತ್ತೆ ಯಾವುದೊ ನಾಯಿ ಅಟ್ಟಿಸಿಕೊಂಡು ಬಂದಿರಬೇಕು"

                  ನಾನು ಅವನನ್ನ ಕರ್ಕೊಂಡು ಆಶ್ರಮಕ್ಕೆ ಬಂದ್ವಿ, ಅವನಿಗೆ ಜೋರಾಗಿ ನಿದ್ದೆ ಬಂದಿತ್ತು ಅವನಿಗೆ ನಾನು ಏನು ಕೇಳಲು ಹೋಗಲಿಲ್ಲ ಅವನು ವಾಪಸ್ಸು ಬಂದಿದ್ದ ನನಗೆ ಅಷ್ಟು ಸಾಕಾಗಿತ್ತು.

ಮಾರನೆ ದಿನ ಬೆಳಿಗ್ಗೆ 7 ಗಂಟೆಗೆ.
   
             ಅರುಣ್ ಅವತ್ತು ಬೇಗನೆ ಎದಿದ್ದ  ನನ್ನ ಕೋಣೆಗೆ ಏನೋ ಹೇಳೋಕೆ ಬಂದಿದ್ದ ಅನಿಸುತ್ತೆ, ಆದರೆ ನಾನು ಅವನನ್ನ ಮೊದಲು ನೋಡಿ ಅವನ ಹತ್ತಿರ ಬಂದೆ ಅವನ ಹತ್ತಿರ ಏನೋ ವಾಸನೆ ಬರ್ತಾ ಇತ್ತು ಸರಿಯಾಗಿ ಅಂಡು ತೊಳದಿರಲಿಲ್ಲ ಸೀದ toilet ಗೆ ಕರ್ಕೊಂಡು ಹೋದೆ ಆದರೆ ಮತ್ತೆ ಈ ಸರಿ ಕೂಡ Flush ಮಾಡಿರಲಿಲ್ಲ.

"ಅರುಣ್!!! ಎಷ್ಟು ಸರಿ ಹೇಳ್ಬೇಕು ನಿನಗೆ ಮಂಗ!!! ಸ್ವಲ್ಪನು ಹೇಳಿದ್ದು ಅರ್ಥಾನೆ ಆಗಲ್ವ ನಿನಗೆ....ಇದು ಬೆಳ್ಳಗೆ ತೊಂಡೆಕಾಯಿ ತರ ಇದೆ ಅಲ್ಲ ಈ buttonನ press ಮಾಡಬೇಕು ಎಷ್ಟು ಸರಿ ಹೇಳೋದು ಅರುಣ್ ನಿನಗೆ"

ಆಶ್ರಮದ ಒಬ್ಬ ಹುಡುಗ: " ಮಾತಾಜಿ ನಿಮ್ಮನ್ನ ಆನಂದ್ ಸರ್ ಕರಿತಾ ಇದಾರೆ"
     
           ಆನಂದ್. ಕುಲಕರ್ಣಿ ನಮ್ಮ ಆಶ್ರಮದ trustee ಅವರು ವಾರಕ್ಕೆ ಕೇವಲ ೩ ದಿನ ಮಾತ್ರ ಆಶ್ರಮದ ಕಡೆಗೆ ಬರ್ತಾ ಇರ್ತಾರೆ ಆದರೆ ಇವತ್ತು ಯಾಕೆ ಬಂದರು ನನಗೆ ಅರ್ಥ ಆಗ್ಲಿಲ್ಲ.

ಆನಂದ್: "ವೈದೇಹಿ ಅವರೇ ಬನ್ನಿ ಇವರು ಶಂಕರ್ ಪ್ರಸಾದ್ ಮತ್ತೆ ಅವರು ಸುಜಾತಾ ಪ್ರಸಾದ್ ಅಂತ, ತುಮಕೂರು ಅಲ್ಲಿ ಇರ್ತಾರೆ ಇಲ್ಲಿ ಒಬ್ಬ ಮಗುನ ದತ್ತು ತೊಗೊಳೋಕೆ ಬಂದಿದಿದಾರೆ, ಬೆಳಗ್ಗೆ ಏನಾಯ್ತು ಅಂದರೆ ಅವರು ಹೀಗೆ ಆಶ್ರಮ ಸುತ್ತುತ್ತ ಇರಬೇಕಾದರೆ ಅರುಣ್ ನೋಡಿದಾರೆ ಅವನು ಇಷ್ಟ ಆಗಿದಾನೆ ಅವನನ್ನ ಕರ್ಕೊಂಡು ಹೋಗ್ತಾರೆ ಅಂತೆ. "

"ಅಯ್ಯೋ ಅವನ!!! ಸರ್ ಅವನು ತುಂಬಾ ತುಂಟ ಹುಡುಗ ಅವನನ್ನ ಸಂಭಾಳಿಸೋದು ಬಹಳ ಕಷ್ಟ"

ಶಂಕರ್ ಪ್ರಸಾದ್ : "ಇರಲಿ ನಮಗೆ ಅಂತ ಹುಡುಗನೇ ಇಷ್ಟ, ಮತ್ತೆ ನಾವು ಇವತ್ತೇ ಅವನನ್ನ ಕರ್ಕೊಂಡು ಹೋಗ್ತೀವಿ ಯಾಕಂದರೆ ಒಂದು ಪೂಜೆ ಮಾಡಿಸಬೇಕು ಅದನ್ನ ಮಾಡಿಸಿ ನಾವು ಮುಂಬೈಗೆ ಹೋಗ ಬೇಕು ಸಮಯ ಬಹಳ ಕಡಿಮೆ ಇದೆ "

ಆನಂದ್: "ಏನು ತೊಂದರೆ ಇಲ್ಲ ದಾರಾಳವಾಗಿ ಕರ್ಕೊಂಡು ಹೋಗಿ"

                            ನಾನು ಒಂದು ಮಾತು ಮಾತಾಡಲಿಲ್ಲ ತಕ್ಷಣ ಓಡಿ ಹೋಗಿ bathroom ಅಲ್ಲಿ ಮುಖ ತೊಳೆದು ಕೊಂಡೆ ನನ್ನ ಕಣ್ಣ ನೀರು ಯಾರಿಗೂ ಕಾಣದಿರಲಿ ಅಂತ, ಎಲ್ಲರೂ ಅರುಣ್ ಗೆ  congrats ಹೇಳ್ತಾ ಇದ್ದರು ಆದರೆ ನನಗೆ ಗೊತ್ತು ಅವನಿಗೆ ಇದು ಇಷ್ಟ ಇಲ್ಲ ಅಂತ, ನಾನು ಅವನ ಬ್ಯಾಗ್ ಪ್ಯಾಕ್ ಮಾಡ್ತಾ ಇದ್ದೆ .

"ಮಾತಾಜಿ ಬೇಡ ಮಾತಾಜಿ, ಅವರಿಗೆ ಹೇಳಿ ನಾನು ಬರಲ್ಲ ಅಂತ, ನನಗೆ ನೀವು ಬೇಕು  ನೀವು ಹೇಳಿದ ಹಾಗೆ ಕೇಳ್ತೀನಿ, flush ಮಾಡ್ತೀನಿ ಯಾರಿಗೂ ಕಾಡಿಸೋಲ್ಲ , please !!! please !!!"

"ಇನ್ನ ಒಂದು ಮಾತು ಮಾತಾಡಿದರೆ ಒದೆ ಬೀಳುತ್ತೆ ಸುಮ್ನೆ ಹೋಗು!!!"

            ಆ ನನ್ನ ಮಾತಿನ ಹಿಂದ ಎಷ್ಟು ನೋವು ಇತ್ತು ಕೇವಲ ನನಗೆ ಗೊತ್ತಿತ್ತು, ಅವನು ಅಳ್ತಾನೆ ಅವರ ಹತ್ತಿರ ಹೋದ ಅವರು ಇಬ್ಬರು ಅವನನ್ನ ಸಮಾಧಾನ ಮಾಡ್ತಾ ಇದ್ದರು.

"ಶಂಕರ್ ಅವರೇ ನಿಮ್ಮ ಮನೆಯಲ್ಲಿ ಇರೋದು comod ಅಥವಾ normal toilet?"

"ಇಲ್ಲ normal Indian ಟಾಯ್ಲೆಟ್"

               ನಾನು ಒಂದು ಸರಿ ಅವನನ್ನು ದಿಟ್ಟಿಸಿ ನೋಡಿದೆ  ಅವನು ಹೋದ ನನ್ನ ನೋಡ್ತಾ ಹಾಗೆ ಅಳುತ್ತ ಹೋದ ನಾನು ಅವತ್ತು ಒಂದು ನಿರ್ಧಾರ ತೊಗೊಂಡೆ ಯಾವ ಮಕ್ಕಳನ್ನು ಹಚ್ಚಿಕೊಳೋದು ಬೇಡ, ಇಲ್ಲಿ ಯಾರು ಶಾಶ್ವತವಾಗಿ ಇರೋಲ್ಲ.


ಬೆಳಿಗ್ಗೆ ಸುಮಾರು ೧೧:೦೦ ಗಂಟೆಗೆ

ಗುಂಡಣ್ಣ: "ಅಮ್ಮ ಯಾರೋ ಇಬ್ಬರು ಗಂಡ ಹೆಂಡತಿ ಬಂದಿದಾರೆ ನಿಮ್ಮನ್ನ ಹುಡುಕಿಕೊಂಡು.."

"ಯಾರು ನೀವು ನಿಮಗೆ ಯಾರು ಬೇಕಾಗಿತ್ತು?"
"ನನ್ನ ಹೆಸರು ಗೋಪಾಲ್ ರಾವ್ ಈಕೆ ನನ್ನ ಹೆಂಡತಿ ನಾವು ನಮ್ಮ ಮಗನನ್ನ ಕರ್ಕೊಂಡು ಹೋಗೋಕೆ ಬಂದಿದಿವಿ"
"ಯಾರು ನಿಮ್ಮ ಮಗ ?"
"ಈ ಫೋಟೋದಲ್ಲಿ ಇರೋ ಹುಡುಗ ಇವಳೇ ನನ್ನ ಹೆಂಡತಿ ನಮ್ಮ ಮಗು ನಾಲ್ಕು ವರ್ಷದವನು ಇದ್ದಾಗ ನಮಗೆ ಸಕೊಕೆ ಆಗೋಲ್ಲ ಅಂತ ತಂದು ಇಲ್ಲಿ ಬಿಟ್ಟಿದ್ದಳು."
     
                   ನನಗೆ ಆ ಫೋಟೋ ನೋಡಿದ ತಕ್ಷಣ ಅಚ್ಚರಿ ಆಯಿತು, ಅದೆ ಫೋಟೋ ನಮ್ಮ ಆಶ್ರಮದ anniversery ದಿನ ನಾನು photographerಗೆ ಹೇಳಿ ತೆಗಿಸಿದ್ದೆ, ಅದು ಅರುಣ್ ನಾಲ್ಕು ವರ್ಷ ಇದ್ದಾಗ ತೆಗಿಸಿದ ಫೋಟೋ, ನಾನು ತಕ್ಷಣ ಅವರ ಹತ್ತಿರ ಇದರ ಬಗ್ಗೆ ಕೇಳೋಣ ಅಂತ ಅಂದುಕೊಂಡು ನೋಡಿದರೆ ಬಂದಿದ್ದವನ ಜೇಬಿಂದ ಹೊರಗೆ ನುಸುಳುತಿದ್ದ ಕತ್ತಿ ನನಗೆ ಕಾಣಿಸಿತು ತಕ್ಷಣ ಅವರನ್ನ ಒಂದು ಕೋಣೆಯಲ್ಲಿ ಕೊಡಿಸಿ ಅವರಿಗೆ ಟೀ/ಕಾಫಿ ಕೊಟ್ಟು ನಾನು ಪೋಲಿಸರಿಗೆ call ಮಾಡಿದೆ, ಅವಾಗ ನನಗೆ ಒಂದು ವಿಷಯ ಹೊಳೆದಿದ್ದು ನಿನ್ನೆ ರಾತ್ರಿ ೧೧ರ ಸುಮಾರು ಅರುಣ್ ಪೊಲೀಸರಿಗೆ ಸಿಕ್ಕಿದ್ದು,ಇವತ್ತು ಬೆಳಿಗ್ಗೆ  ಇಬ್ಬರು ಬಂದು ಅವನನ್ನ ಕರೆದುಕೊಂಡು ಹೋಗಿದ್ದು, ಬಹಳ ತಲೆ ಓಡಿಸಿ ಅವರ ೧೫ ನಿಮಿಷ ಸಮಯ ವ್ಯರ್ಥ ಮಾಡಿದೆ, ಬಹಳ ಬೇಗನೆ head constable ಮುನಿಲಿಂಗಪ್ಪ ಜೊತೆ S.I ಹರಿಪ್ರಸಾದ್ ಬರ್ತಾರೆ ಆ ೧೫ ನಿಮಿಷ ಭಯದಲ್ಲಿ ಕಳೆದು ಒಂದೊಂದು ನಿಮಿಷ ಒಂದೊಂದು ಯುಗದ ಹಾಗೆ ಭಾಸವಾಗಿತ್ತು.....

                                           S.I  ಒಳಗೆ ಬರೋದು ಅವರಿಗೆ ಗೊತ್ತಾಗಿ ಅವರು ತಕ್ಷಣ ಹೊರಗೆ ಬಂದು ಕತ್ತಿಯಿಂದ  ಹೆದರಿಸೋಕೆ ಶುರು ಮಾಡಿದರು ನಾನು ಅವಾಗ ಹೊರಗೆ ಗಾರ್ಡನ್ ಹತ್ತಿರ ಇದ್ದ ನೀರಿನ ಪೈಪ್ ಇಂದ ನಾನು ಅವರಿಗೆ ನೀರನ್ನ ಎರಚಿದೆ, ಅವಾಗ ತಕ್ಷಣ ಮುನಿಲಿಂಗಪ್ಪ ಅವರು ಅವರಿಬ್ಬರನ್ನ ಹಿಡಿದರು, ಅವಾಗ ಅವರನ್ನ ವಿಚಾರಿಸಿದಾಗ ಅವರು ಹೇಳಿದ್ದು "ನಮಗೇನು ಗೊತ್ತಿಲ್ಲ ಸರ್, ಚಕ್ರಪಾಣಿ ಅಂತ ನಮ್ಮ ಸ್ನೇಹಿತ ಈ ಫೋಟೋ ಕೊಟ್ಟಿ ಇದನ್ನ ತೋರಿಸಿ ಈ ಹುಡುಗನನ್ನ ಹೇಗಾದರೂ ಮಾಡಿ ಕರ್ಕೊಂಡು ಬಾ ಜೊತೆಗೆ ಯಾವುದೇ ಕಾರಣಕ್ಕೂ ಅವನ ಬ್ಯಾಗ್ ತರೋದು ಮರಿಬೇಡ ಅಂತ ಹೇಳಿ ಕಳಿಸಿದ್ದ.... "

                        ಅವರನ್ನ custody ಒಳಗೆ ತಗೊಂಡು ಅವರ ವಿಚಾರಣೆ ಶುರು ಮಾಡಿದ್ದರು ಆದರೆ ನನ್ನ ಹಾಗು ಪೋಲಿಸ್ ಅವರ ಚಿಂತೆ ಆಗಿದ್ದು  ಮುಂಚೆ ಬಂದು ಕರೆದುಕೊಂಡು ಹೋದವರು ನಿಜವಾಗಲು ದತ್ತು ತೊಗೊಳೋಕೆ ಬಂದವರೇ? S.I ಅವರು ಆನಂದ್ ಅವರ ಹತ್ತಿರ ಶಂಕರ್ ಅವರ number, address ತಗೊಂಡರು ಆದರೆ ವಿಚಾರಿಸಿದಾಗ ಅದು fake ಅಂತ ಗೊತ್ತಾಯ್ತು, ಅವರು ಆನಂದ್ ಅವರಿಗೆ ೨೫ ಸಾವಿರ ಕೊಟ್ಟು ಯಾವುದೆ ಸರಿಯಾದ proof ಕೊಡದೆ ಕರೆದುಕೊಂಡು ಹೋಗಿದ್ದರು, ಆನಂದ್ ಅವರಿಗೆ ದುಡ್ಡಿನ ಚಪಲ ಬಹಳ ಇತ್ತು  ಆದರೆ ಇಂತ ಕೆಲಸ ಮಾಡ್ತಾರೆ ಅಂತ ನಾನು ಅಂದು ಕೊಂಡಿರಲಿಲ್ಲ , ನನಗೆ ಅವಾಗ ಆತಂಕ ಜಾಸ್ತಿ ಆಯಿತು ಏನು ಮಾಡಿದರೋ ಆ ಪುಟ್ಟ ಮಗುನ ಎಂಬ ಭಯ ಹೆಚ್ಚಾಗಿತ್ತು. ನಮ್ಮ ಅಶ್ರಮದ ಮುಂಬಾಗಿಲ ಹತ್ತಿರ CCTV  ಹಾಕಿದ್ದರು ಅದನ್ನು ಪೊಲೀಸರು ನೋಡಿದಾಗ, ಅವರು ಶಂಕರ್ ನನ್ನ ಗುರುತಿಸಿದರು ಅದು ಶಂಕರ ಅಲ್ಲ ಅವನು ೩-೪ ಕಳ್ಳತನದ ಕೇಸ್ ಅಲ್ಲಿ  ಸಿಕ್ಕಿ ಹಾಕಿಕೊಂಡಿದ್ದ ವೆಂಕಟೇಶ್ alias ವೆಂಕಿ ಆಗಿದ್ದ, ಅವನ trace ಆಗಿ ಇಟ್ಟಿಕೊಂಡು ಪೋಲಿಸ್ ಅವರು ಅವರಿಗೆ ಗೊತ್ತಿರೋ informersನ ಹುಡುಕಿ ಅವರಿಂದ ಅವನ ಬಗ್ಗೆ ಸುಳಿವನ್ನು ಪಡಿಯುತ್ತಾರೆ ನಂತರ ಅವರಿಗೆ ಒಬ್ಬ informer ಇಂದ ಗೊತ್ತಾಗೋದು ಅವನು ಒಂದು ಹೊಸ ಮನೆ ಇತ್ತೀಚಿಗಷ್ಟೇ ತಗೊಂಡಿರೋ ವಿಚಾರ, ತಕ್ಷಣ ಅಲ್ಲಿಗೆ S.I ಅವರು ಅವರ ಇಬ್ಬರು constables ಕರೆದುಕೊಂಡು ನಡಿತಾರೆ, ನನ್ನ ಹಟಕ್ಕೆ ಬೇಸತ್ತು ಕೊನೆಗೆ ನನ್ನನ್ನು ಕರೆದು ಕೊಂಡು ಹೋಗ್ತಾರೆ.


ಸಮಯ ಸುಮಾರು ಸಂಜೆ 7  ಗಂಟೆ
ಮನೆ ಊರಿಂದ ತೀರ ದೂರ  ಅಕ್ಕ ಪಕ್ಕ ಯಾವ ಮನೆಯು ಇಲ್ಲ, ತಾವರೆಕೆರೆ ಬಳಿ ಒಂದು ಫ್ಯಾಕ್ಟರಿಯ ಹಿಂದೆ ಒಂದು ಸಂಧಿ ಯಲ್ಲಿ  ಇತ್ತು, ಬಾಗಿಲು ತೆರದಿತ್ತು ಒಳಗಿಂದ ಯಾರೋ ಒಬ್ಬರು ಜೋರಾಗಿ ಕೂಗ್ತಾ ಇದ್ದರು "ನೋಡು ವೆಂಕಿ ಒಂದು ನಿಮಿಷ ನನಗೆ ಆ ಬ್ಯಾಗ್ ಕೊಡು ಆ ಹುಡುಗನನ್ನ ನೀನೆ ಇಟ್ಟಿಕೋ, ಸರಿ ಶೇರ್ 50:50 ತೊಗೊಳೋಣ ಹಠ ಮಾಡಬೇಡ ನನ್ನ ಮಾತು ಕೇಳು!!! ಕೈಗೆ ಸಿಕ್ಕಿರೋ ಚಿನ್ನಗೋಸ್ಕರ ನಾವಿಬ್ಬರು ಜಗಳವಾಡಿ ಕೊನೆಗೆ ಅದು ಮೂರನೆಯವನಿಗೆ ಸಿಗಬಾರದು"
ಅಷ್ಟರಲ್ಲಿ ಪೊಲೀಸರು ಒಳಗೆ ನುಗ್ಗಿ ಚಕ್ರಪಾಣಿ, ವೆಂಕಿ ಮತ್ತು ಅವನ ಹೆಂಡತಿಯನ್ನು ಹಿಡಿದು ಒಂದು ಮೂಲೆಯಲ್ಲಿ ಕೂಡಿಸಿ ಇಬ್ಬರಿಗೂ ಏನು ಕೇಳದೆ ಮೊದಲಿಗೆ ಎರಡು ಮೂರು ಏಟು ಕೊಡ್ತಾರೆ.ಆದರೆ ನನ್ನ ಅರುಣ್ ಅಲ್ಲಿ ಎಲ್ಲೂ ಇರೋದಿಲ್ಲ .

S.I: "ಏನು deal ಅಂತ ಬಿಡಿಸಿ ಎಲ್ಲ correct ಆಗಿ ಬಾಯಿ ಬಿಟ್ಟರೆ ಸರಿ ಇಲ್ಲ ಅಂದರೆ ನಿನ್ನ ಸ್ಟೇಷನ್ ಗೆ ಕರ್ಕೊಂಡು ಹೋಗೋಲ್ಲ ಅಲ್ಲಿ ಒಳಗೆ ನಿನ್ನ ಹಾಕೋಕೆ ಜಾಗ ಇಲ್ಲ , ಇಲ್ಲೆ ನಿನ್ನೆ ಹೂತು ಹಾಕೇ ಹೋಗೋದು"

ಚಕ್ರಪಾಣಿ: "ಸರ್ ನನಗೇನು ಗೊತ್ತಿಲ್ಲ ಸರ್ ಈ ವೆಂಕಿನೆ ಆ ಮಗುನ ಕರ್ಕೊಂಡು ಬಂದಿದ್ದು, ನನಗು ಇದಕ್ಕೂ ಸಂಬಂಧ ಇಲ್ಲ"

        ವೆಂಕಿಗೆ ಏಟು ಬಹಳ ಜೋರಗಿ ಬಿದಿತ್ತು ಅವನು ಬಹಳ ಹೆದರಿದ್ದ S.I ಒಂದು ಸರಿ ಅವನನ್ನ ದಿಟ್ಟಿಸಿ ನೋಡಿದಕ್ಕೆ ಹೆದರಿ ಎಲ್ಲ ಬಾಯಿ ಬಿಡೋಕೆ ಮೊದಲು ಅವನು ಶುರು ಮಾಡಿದ್ದೂ

ವೆಂಕಿ: "ಸರ್ ಏನಾಗಿದ್ದು ಅಂದರೆ ನಾನು ನಿನ್ನೆ ಇವನ ಮನೆ ಹತ್ರ ಹೋದಾಗ ಅವನು ಯಾರೋ ಇಬ್ಬರಿಗೆ ಹೀಗೆ ಆಶ್ರಮಕ್ಕೆ ಹೋಗಿ ಈ ಹುಡುಗನನ್ನ ಕರೆದುಕೊಂಡು ಬನ್ನಿ ಅಂತ ಹೇಳ್ತಾ ಇದ್ದ ನಾನು ಅದುಕ್ಕೆ ಅವರಿಬ್ಬರಿಗಿಂತ ಮುಂಚೆ ಹೋಗಿ ಕರೆದು ತಂದು ಲಾಭದಲ್ಲಿ ನಂದು ಪಾಲು ಕೇಳೋಣ ಅಂದುಕೊಂಡಿದ್ದೆ.. "

S.I: " ಚಕ್ರಪಾಣಿ ನಿಜವಾಗಿ ಆ ಮಗು ಎಲ್ಲಿದೆ ಅಂತ, ಯಾಕೆ ಕರೆದುಕೊಂಡು ಬಂದೆ ಅಂತ ಹೇಳ್ತಿಯಾ ಇಲ್ಲ ಅಂದರೆ.... "

ಚಕ್ರಪಾಣಿ: "ಆ ಹುಡುಗ ಇಲ್ಲೇ toilet ಗೆ  ಹೋಗಿದಾನೆ, ಸರ್ ನಿಜ ಹೇಳ್ತೀನಿ MBP ಅಂತ ಅಮೇರಿಕಾದು ಒಂದು ದೊಡ್ಡ ಕಂಪನಿ ಅದುಕ್ಕೆ ನಮ್ಮ ಕರ್ನಾಟಕದ ಯಾವುದೋ  ಒಂದು ಭಾಗ ದಲ್ಲಿ ಪ್ಲಾಟಿನಂ ಸಿಗುತ್ತೆ ಅಂತ ಗೊತ್ತಾಗಿದೆ ಅದು ನಮ್ಮ  Geology Department ಅವರಿಗೂ ಗೊತ್ತು ಆದರೆ ಅಲ್ಲಿ ಮೈನಿಂಗ್ ಮಾಡಿದರೆ ಪ್ರಕೃತಿ ಬಹಳ ನಾಶವಾಗುತ್ತೆ ಅದುಕ್ಕೆ ಅವರು ಈ ವಿಷಯವನ್ನ ಮುಚ್ಚಿ ಇಟ್ಟಿದಾರೆ ನಾನು ಅಲ್ಲೇ ಕೆಲಸ ಮಾಡೋದು ,ನಾನು ಅದುನ್ನ ಕದ್ದು ಅವರಿಗೆ ಆ information ಕೊಟ್ಟರೆ ಅವರು ನನಗೆ ಹತ್ತು ಕೋಟಿ ಕೊಡೋಕೆ ಸಿದ್ದವಾಗಿದ್ದರು, ನಿನ್ನೆ ಅದು ಪೋಲಿಸ್ ಅವರಿಗೆ ಗೊತ್ತಾಗಿ ನನ್ನ chase ಮಾಡಿದರು ನಾನು ಓಡಿ ಹೋಗೋವಾಗ ಈ ಹುಡುಗ ಸಿಕ್ಕಿದ ಇವನನ್ನ ಇಟ್ಕೊಂಡು blackmail ಮಾಡಿ ಅಲ್ಲಿಂದ ತಪ್ಪಿಸಿಕೊಂಡೆ ಆ information ಇದ್ದ memory card ಪೋಲಿಸ್ ಅವರಿಗೆ ಸಿಗಬಾರದು ಅಂತ ನಾನು ಆ cardನ ಒಂದು choclate ಒಳಗೆ ಹಾಕಿ ಅದನ್ನ ನಾನು ಅವನ ಬ್ಯಾಗ್ ಒಳಗೆ ಹಾಕಿದ್ದೆ ಆದರೆ ಅವನು ರಾತ್ರಿ ನನ್ನಿಂದ ತಪ್ಪಿಸಿಕೊಂಡು ಓಡಿ ಹೋದ ಅದುಕ್ಕೆ ಕರೆದುಕೊಂಡು ಬರೋ ಪ್ಲಾನ್ ಹಾಕಿದ್ದು , ಅಷ್ಟರಲ್ಲಿ ಅದುನ್ನ ಕೇಳಿಸಿಕೊಂಡು ಅವನನ್ನ ಈ ವೆಂಕಿ ಕರೆದುಕೊಂಡು ಬಂದ"

S.I: "ಏನು ಹತ್ತು ಕೋಟಿನಾ!!!! ವೆಂಕಿ ಆ ಬ್ಯಾಗ್ ಎಲ್ಲಿ?"

ವೆಂಕಿ :"ಸರ್ ಆ ರೋಮ್ ಅಲ್ಲಿ  ಇದೆ"

S.I : "ವೆಂಕಿ ಎಲ್ಲಿ ಇದರಲ್ಲಿ ಯಾವ choclate ಇಲ್ಲ ಏನು ಮಾಡಿದೆ?"

ವೆಂಕಿ ಹೆಂಡತಿ: "ಸರ್ ಆ ಹುಡುಗ ಬೆಳಿಗ್ಗೆ  ಹಠ ಮಾಡ್ತಿದ್ದ ಅದುಕ್ಕೆ ಆ choclateನ ಕೊಟ್ಟೆ ಆದರೆ ಅವನು ತಿನ್ನಲಿಲ್ಲ ಕೋಪ ಮಾಡ್ಕೊಂಡು ಜೇಬಲ್ಲಿ ಇಟ್ಕೊಂಡ"

                 S.I, head constable ಇಬ್ಬರು toilet ಬಾಗಿಲು ತಟ್ಟೋಕೆ ಶುರು ಮಾಡ್ತಾರೆ ಇಷ್ಟು ಹೊತ್ತು ಆ ಮಗು ಮೇಲೆ ಇಲ್ಲದ ಯೋಚನೆ ಒಂದೇ ಸಮನೆ ಬಂದು ಬಿಡುತ್ತೆ ಅರುಣ್ ಹೆದೆರಿಕೊಂಡು ಬಾಗಿಲು ತೆಗಿದು ಹೊರಗೆ ಬರ್ತಾನೆ ನನ್ನ ಅವನ ಹತ್ತಿರ ಹೋಗೋಕೆ ಬಿಡೋದಿಲ್ಲ, constable ಅವನ ಚಡ್ಡಿ, ಅಂಗಿ ಎಲ್ಲ ಚೆಕ್ ಮಾಡ್ತಾರೆ

S.I: "ಮರಿ ನಿನ್ನ ಹತ್ತಿರ ಒಂದು chocolate ಇತ್ತು ಅಲ್ಲ ಅದು ನನಗೆ ಕೊಡ್ತಿಯಾ ನಾನು ನಿನಗೆ ದೊಡ್ಡದು ಕೊಡ್ತೀನಿ"

ಅರುಣ್: "ಯಾವುದು eclairs ಆ ಅದು ನಾನು ಅವಾಗೆ ತಿಂದೆ ಅದು ಚೆನಾಗಿಲ್ಲ ಸರ್ ಗಂಟಲಲ್ಲಿ ಸ್ವಲ್ಪ ಸಿಕ್ಕಾಕೊಳತ್ತೆ ಆಮೇಲೆ ನೀರು ಕುಡಿದ ಮೇಲೆ ಸರಿ ಆಯಿತು"
 
          ಅವನು ಅವಾಗ ನನ್ನ ನೋಡಿ ನನ್ನ ಬಳಿ ಓಡಿ ಬರ್ತಾನೆ ಎಲ್ಲರೂ ಸುಮ್ಮನೆ ಆಗ್ತಾರೆ ಏನೋ ಗರ ಬಡೆದು ಕೊಂಡೋರು ತರ, ಚಕ್ರಪಾಣಿ ಸಣ್ಣಗೆ ಆಗಲೇ ಆಳೋಕೆ ಶುರು ಮಾಡಿರ್ತಾನೆ, ನನಗೆ ಅರುಣ್ ನೋಡಿ ಬಹಳ ಕುಶಿ ಆಗಿರುತ್ತೆ ಇನ್ನು ಯಾವಾಗಲು ಇವನನ್ನ ಬೈಯೋಲ್ಲ ಇನ್ನು ಇವನು ನನ್ನ ಮಗನೆ ಅನ್ನೋ ನಿರ್ಧಾರ ನಾನು ಅಲ್ಲಿ ತಗೊಳ್ತೀನಿ, ಅವನು ಬಂದು ನನ್ನ ಗಟ್ಟಿ ಅಪ್ಪಿಕೊಳ್ಳುತಾನೆ ನಾನು ಅವನ ಹಣೆಗೆ ಒಂದು ಮುತ್ತನ ಇಡೋವಾಗ ನನ್ನ ಕಣ್ಣಲ್ಲಿ ನೀರು ಇರುತ್ತೆ. 

ಅರುಣ್: " ಮಾತಾಜಿ ಅದು chocolate ತಿಂದ ಮೇಲೆ ಹೊಟ್ಟೆ ಎಲ್ಲ ಒಂದು ತರಾ ಅಗ್ತಾ ಇತ್ತು ಅದುಕ್ಕೆ toiletಗೆ ಹೋಗಿದ್ದೆ ಇವರು ಬರ್ತಾ ನಿಮಗೆ ಸುಳ್ಳು ಹೇಳಿ ಕರ್ಕೊಂಡು ಬಂದಿದಾರೆ ಇಲ್ಲಿ ಹಳೆ ತರದ್ದು toilet ಇಲ್ಲ , ಇಲ್ಲಿ ಇರೋದು comod ಎ ಆದರೆ ಈ ಸರಿ ನಾನು FLUSH  ಮಾಡೋದು ಮರಿಲಿಲ್ಲ!!!"



                           
               
         

     






         


     

Monday 14 March 2016

ಕಾಂತಿ

ಕಾಂತಿ 




           " ಸರ್ ಎಲ್ಲಿಗೆ ಹೋಗ್ತಾ ಇರೋದು ನಾಳೆ ನೀವು ?"
           "ಧರ್ಮಸ್ಥಳ"
           "ಎಷ್ಟು ದಿನ?"
           "ನಾಲ್ಕು ದಿನ ಆಗುತ್ತೆ ಹಾಗೆ ೨ ದಿನ ನಮ್ಮ ಮನೆಯೋರ ಊರು ಕುಂದಾಪುರಕ್ಕೆ ಹೋಗಿ ಬರ್ತೀವಿ"
           "ಆದರು ಇವತ್ತು ತುಮಕೂರು ಹೋಗೊ ಅವಶ್ಯಕತೆ ಇರ್ಲಿಲ್ಲ ಆಲ್ವಾ ಸರ್?"
           "ಹೌದು ಆದರೆ ನನಗೆ ಇತ್ತೀಚೆಗೆ ತುಂಬಾ case ನೋಡಿ ಹಗಲು ರಾತ್ರಿ station ಅಲ್ಲಿ ಇದ್ದು ಸಾಕಾಗಿತ್ತು, ಸ್ವಲ್ಪ relief ಬೇಕಾಗಿತ್ತು "
          "ನೀವು ಆಗಿದಕ್ಕೆ ಮಾಡ್ತಾ ಇದ್ದೀರಾ ಸರ್, ಮುಂಚೆ ಇದ್ದ officer ಅವರಿಗೆ ಬೇಕಾದಾಗ ಬರೋರು ಬೇಡಾದಾಗ  ಹೋಗೋರು, ಎಲ್ಲ ಕೆಲಸ ನಾನು ನಾಗರಾಜು ಮಾಡಿ ಮಾಡಿ ಸಾಕಾಗಿತ್ತು "
          "ಅವರು ಇವಾಗಲು ಚಾಮರಾಜಪೇಟೆ ಅಲ್ಲಿ ಆರಾಮಾಗಿ ಇದ್ದಾರೆ, ಅದೇನೋ ಎಲ್ಲ ಕೇಸ್ ನನಗೆ ಬರುತ್ತೆ ಅನಿಸುತ್ತೆ"
          "ಸರ್ ಆದರು ಹೋದ ವಾರ ಮುಚ್ಚಿಹೊಯ್ತಲ್ಲ ಭರತ್ ಕುಮಾರ್ ಅವರ ಕೇಸ್ ಅದರ ಬಗ್ಗೆ ನೀವು ಮಾತಾಡೋಕೆ ಯಾಕೆ ಇಷ್ಟಪಡ್ತಿಲ್ಲ?"
          "ಇನ್ನು ಏನು ಹೇಳ್ಬೇಕು ಗೋವಿಂದಣ್ಣ , ಕೊಲೆ ಮಾಡಿದೋನು ಬದಕಿಲ್ಲ ಯಾಕೆ ಮಾಡಿದ ಅಂತ ಹೇಳದೆ ಸತ್ತಿ ಹೋದ ಬೇರೆ ಯಾವುದೇ lead ಇಲ್ಲ,ಅದು ಬೇರೆ ಕತ್ರಿಗುಪ್ಪೆ areaದಲ್ಲಿ  ಎರಡು ಮರ್ಡರ್ ಆಗಿವೆ ಅದರ ಬಗ್ಗೆ investigation ಮಾಡಬೇಕು ಅದುಕ್ಕೆ ACP ಸರ್ close ಮಾಡ್ಬಿಡಿ ಅಂತ ಹೇಳಿದರು "
          "ಸರ್ ಮತ್ತೆ ನೀವು ಹೋದ ವಾರ ಇಂದ ಯಾಕೆ ಒಂದು ತರ ಇದ್ದೀರಾ?" ಯಾಕೆ ಹೋದ ಶುಕ್ರವಾರ  ಸಂಜೆ ನೀವು station ಇಂದ ಹೊರಗೆ ಓಡಿ ಹೋಗಿ ಪುಟ್ಟಣ್ಣಗೆ ಗಾಡಿ ತೆಗಿಯೋಕೆ ಹೇಳಿ gate ಹತ್ತಿರ ನಿಂತು ಏನೋ ಮೇಲೆ ಆಕಾಶ  ನೋಡಿ ಮತ್ತೆ ಯಾಕೆ ವಾಪ್ಪಸ್ಸು ಬಂದಿದ್ದು  ? "
       "ಏನು ಇಲ್ಲ ಗೋವಿಂದು, ಏನು ಆಗಿಲ್ಲ ಅವತ್ತು?"
        "ಸರ್ ತಪ್ಪು ತಿಳಿ ಬೇಡಿ ನಾನು ಆ ಗೊಂಬೆ ಒಳಗೆ ಸಿಕ್ಕ ಪತ್ರದಲ್ಲಿ ಇದ್ದ ಪದ್ಯ ಓದಿದೆ,ನನಗೆ ಏನು ಅರ್ಥ ಆಗ್ಲಿಲ್ಲ, ಆದರೆ ಅದರಲ್ಲಿ ಏನೋ ವಿಷಯ ಇದೆ  ನಾನು ಹೋದ ವಾರ ೩ ದಿನ ಊರಿಗೆ ಹೋಗಿದ್ದೆ ರಜೆ ಹಾಕಿ ಅದಕ್ಕಾಗಿ ನನಗೆ ಪೂರ್ತಿ ವಿಷಯ ಗೊತ್ತಿಲ್ಲ, ಸರಿಯಾಗಿ ಏನಾಗಿದೆ ಅಂತ ಈ ಕೇಸ್ ಅಲ್ಲಿ  ನಿಮ್ಮ ಜೊತೆ  ಇದ್ದ  ನಾಗರಾಜುಗು ಗೊತ್ತಿಲ್ಲ, ನೀವು ನನ್ನ ಹತ್ತಿರ ಏನು ಯಾವತ್ತು  ಮುಚಿಟ್ಟಿಲ್ಲ  ನಿಮಗೆ ಹೇಳ್ಬೇಕು ಅನಸಿದರೆ ಹೇಳಿ, ಇನ್ನು ಬಲವಂತ ಮಾಡೋಲ್ಲ"

"ಗೋವಿಂದಣ್ಣ ನೀವು head constable ಆಗಿ ೨೫ ವರ್ಷ ಇಂದ ಇದ್ದೀರಾ ಎಷ್ಟೋ ಕೇಸ್ ನೋಡಿರ್ತಿರಾ ನಾನು S.I ಆಗಿ ಇನ್ನು ೪ ವರ್ಷ ಆಗಿದೆ ಅಷ್ಟೇ ಅದುಕ್ಕೆ ಸ್ವಲ್ಪ disturb ಆಗಿರೋದು"

"ಯಾವತ್ತು ಆಗಿದ್ದು ?"

             
                  ಮಾರ್ಚ್ ೧೨ ಸುಮಾರು ರಾತ್ರಿ ಹತ್ತು ಗಂಟೆಗೆ, ಮನೆಯಲ್ಲಿ ಊಟ ಮಾಡ್ತಾ ಇದ್ದೆ ಸಾಂಬಾರ್ ಅಲ್ಲಿ ಉಪ್ಪು ಜಾಸ್ತಿ ಆಗಿತ್ತು ಅದುಕ್ಕೆ ಅನಸುಯಗೆ ಬೈತಾ ಇದ್ದೆ ಅವಾಗ ಫೋನ್ ಬಂತು, ಬನಶಂಕರಿ 3rd stage ಹತ್ತಿರ ಮನೆ ನಾನು ನಾಗರಾಜು spotಗೆ ತಕ್ಷಣ ಹೋದ್ವಿ ಅವರನ್ನ ಆಸ್ಪತ್ರೆ ಕರ್ಕೊಂಡು ಹೋಗಿದ್ರು ಪ್ರಾಣ ಸುಮಾರು 9ಗೆ ಹೋಗಿತ್ತು ಮನೆಯಲ್ಲಿ ಯಾರು ಇರಲಿಲ್ಲ ಅವರ  ಹೆಂಡತಿ ಮಗ ಹೊರಗಡೆ ಹೋಗಿದ್ದರು, ಕೊಲೆ ಆಗಿ ಹತ್ತು ನಿಮಿಷದಲ್ಲಿ ಪಕ್ಕದ ಮನೆಯೋರು ಅವರ ಮಗಂಗೆ ಫೋನ್ ಮಾಡ್ತಾರೆ ಆದರೆ ಬಂದು ಆಸ್ಪತ್ರೆ ತಗೊಂಡು ಹೋಗೋ  ಅಷ್ಟರಲ್ಲಿ he is no more, ಭರತ್ ಕುಮಾರ್ ಅವರು ಸೋಫಾ ಮೇಲೆ ಕೂತು T.V ಕಡೆ ತಲೆ ಮಾಡಿ ಕೂತಿದಾರೆ ಅವಾಗ ಹಿಂದಿಂದ ಯಾರೋ ಬಂದು ಕುತ್ತಿಗೆಗೆ ಕತ್ತಿ ಹಾಕಿದಾರೆ, ಕೊಗೂಕೆ ಆಗದೆ ಚೀರೋಕೆ ಆಗದೆ ಅಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದಾರೆ

ಗೋವಿಂದಣ್ಣ: "ಮತ್ತೆ ಪಕ್ಕದ ಮನೆಯೋರಿಗೆ ಹೇಗೆ ಗೊತ್ತಾಗಿದ್ದು?"

             ಅವರ ಸ್ಟೂಡೆಂಟ್ ಗಿರಿಧರ, ಅವನು ಅವತ್ತು ಅವರ ಮನೆಗೆ ಸುಮಾರು 9 ಗಂಟೆಗೆ, ಭರತ್ ಕುಮಾರ್ ಅವರೇ ಅವನಿಗೆ ಮನೆಗೆ ಬರೋಕೆ ಹೇಳಿದ್ದರು ಅದುಕ್ಕೆ ಅವನು ಹೋಗಿದ್ದ ಅವನಿಂದ ಪಕ್ಕದ ಮನೆಯೋರಿಗೆ ಗೊತ್ತಾಗಿ ಅವರು  ಮಗನಿಗೆ ಫೋನ್ ಮಾಡಿದ್ದು, postmortem ರಿಪೋರ್ಟ್ ಎರಡು ದಿನ ಆದಮೇಲೆ ಬಂತು ಅದರ ಪ್ರಕಾರ ಅವರು ಸುಮಾರು 8:50ಗೆ ಪ್ರಾಣ ಬಿಟ್ಟಿದರು, ಸಾಕ್ಷಿ ಇದ್ದಿದು ಒಬ್ಬನೇ ಅವರ ಸ್ಟೂಡೆಂಟ್ ಆದರೆ....

ಗೋವಿಂದಣ್ಣ:"ಆದರೆ... ಏನ್ ತೊಂದರೆ ಇತ್ತು ಸರ್?"

              ಅವನು ಹುಟ್ಟು ಕುರುಡ, ಭರತ್ ಕುಮಾರ್ ಅವರು ಪ್ರಿನ್ಸಿಪಾಲ್ ಆಗಿದ್ದ  S.J.C ಕಾಲೇಜ್  ಅಲ್ಲಿ ಓದ್ತಾ ಇದ್ದ, ಮನೆಯೋರು, ಫ್ರೆಂಡ್ಸ್ ಎಲ್ಲರನ್ನು ವಿಚಾರಿಸಿ ಆಗಿತ್ತು ಯಾವುದೇ ಸುಳಿವು ಸಿಕ್ಕಿರಲಿಲ್ಲ ಯಾವುದೇ finger prints ಇಲ್ಲ, ಕೊನೆಗೆ ಏನು ಮಾಡದೇ ಗೊತ್ತಾಗದೆ ಅವರ ಫೋನ್ call list ಅಲ್ಲಿ ಇದ್ದ ಎಲ್ಲರನ್ನು ವಿಚಾರಿಸೋಕೆ ಶುರು ಮಾಡಿದ್ವಿ, ಅವಾಗ ಗಿರಿ ಸ್ವತಃ ತಾನೆ ಸ್ಟೇಷನ್ ಗೆ ಬಂದ.

ಗೋವಿಂದಣ್ಣ:"ಅಲ್ಲಿ ತನಕ ಅವನನ್ನ ನೀವು ವಿಚಾರಿಸಲಿಲ್ವಾ?"
 
              ಅವನು ೨ ದಿನ  ಚೆನ್ನೈ ಗೆ ತೆರಳಿದ್ದ ನಂತರ ಅವನು ಅಲ್ಲಿಂದ ಬಂದ ದಿನಾನೆ ಅವನು ಸ್ಟೇಷನ್ ಗೆ ಬಂದ, ಅವನ ಪ್ರಕಾರ ಅವನು ರಾತ್ರಿ ೯ ಗೆ ಅಲ್ಲಿಗೆ ಹೋದಾಗ, tv ಶಬ್ದ ಜೋರಾಗಿ ಬರ್ತಾ ಇರುತ್ತೆ ಒಳಗಡೆಯಿಂದ ಯಾರೋ ನಗ್ತಾ ಇರೋದು ಕೇಳಿಸುತ್ತೆ ಇವನು ಗೇಟ್ ಯಿಂದ ಸ್ವಲ್ಪ ಮುಂದೆ ಬರೊ ಅಷ್ಟರಲ್ಲಿ  ಯಾರೋ ಇವನನ್ನ ದೂಡಿ  ಓಡಿ  ಹೋಗ್ತಾರೆ ಅವನು ಕೆಳಗೆ ಬಿದ್ದಿದಕ್ಕೆ ತಲೆಗೆ ಏಟು ಬಿದ್ದು  "ಅಮ್ಮಾ !!!" ಅಂತ ಚೀರಿದ್ದು ಪಕ್ಕದ ಮನೆಯೋರಿಗೆ ಕೇಳಿಸುತ್ತೆ....

     ಗೋವಿಂದಣ್ಣ:"ಇದರಿಂದ ನಿಮಗೆ ಏನು lead ಸಿಗುತ್ತೆ?"
         
           ನಾವು ಮನೆಯೊರನ್ನ ವಿಚಾರಿಸಿದಾಗ ಅವರ ಪ್ರಕಾರ ಅವರಿಗೆ ಯಾರು ಶತ್ರು ಆಗಲಿ ಅಥವಾ ಯಾರಿಂದ ಆದರು threat ಆಗಲಿ ಇರಲಿಲ್ಲ, ಆದರೆ ಗಿರಿ ಹೇಳಿದ್ದು "ಸರ್ ನಾನು ತುಂಬಾ ಸರಿ ಕೇಳಿದೀನಿ ಅವರು tension , ಸಿಟ್ಟಿನಿಂದ ಫೋನ್ ಅಲ್ಲಿ ಮಾತಾಡೋದು ನನಗೆ ಅನಿಸುತ್ತೆ ಅವರಿಗೆ ಶತ್ರುಗಳು ಇದ್ದರು ಯಾರು ಅನ್ನೋದು ಗೊತ್ತಿಲ್ಲ, ಮತ್ತೆ ಇನ್ನೊಂದು ವಿಷಯ ಏನಂದರೆ ನಾನು ಅವತ್ತು ಜೋರಾಗಿ ಕೇಳಿದ್ದ ಆ ನಗು ಮುಂಚೆ ಎಲ್ಲೊ ಕೇಳಿದ್ದೆ ಯಾವಾಗ ಅನ್ನೋದು ನೆನಪಿಗೆ ಬರ್ತಾ ಇರಲಿಲ್ಲ, ಸ್ವಲ್ಪ ಹೊತ್ತಿಗೆ ಮುಂಚೆ ಗೊತ್ತಾಗಿದ್ದು ಅದು ನಾನು ಒಂದು ಸರಿ ಪ್ರಿನ್ಸಿಪಾಲ ಚೇಂಬರ್ ಒಳಗೆ ಹೋದಾಗ ಅವರು ಫೋನ್ ಅಲ್ಲಿ ಒಬ್ಬರ ಜೊತೆ ಮಾತಾಡ್ತಾ ಇದ್ದರು ಆ ಫೋನ್ ಅಲ್ಲಿ ನಾನು ಕೇಳಿದ್ದೆ ಆ ನಗು ಜೋರಾಗಿ ಮೈಮರೆತು ಇಡಿ ಊರಿಗೆ ಕೇಳಿಸೋ ಹಾಗೆ ಇತ್ತು  ಅಷ್ಟೇ ಅಲ್ಲ  ಮೂರು ನಾಲ್ಕು ಸರಿ ಕೇಳಿದೀನಿ.... "

 

            ಈ ಆದಾರ ಇಟ್ಟಿಕೊಂಡು ನಾವು  ಭರತ್ ಕುಮಾರ್ call list ಅಲ್ಲಿ ಇರೋ numbersನ ವಿಚಾರಿಸೋಕೆ ಶುರು ಮಾಡಿದಿವಿ. ನಾನು ಒಂದು ಪುಸ್ತಕದಲ್ಲಿ ಓದಿದ್ದೆ, ಕೊಲೆ ಆಗಿರೋ ವ್ಯಕ್ತಿಗೆ ಯಾರು ಶತ್ರು ಇಲ್ಲ ಅಂದರೆ, ಯಾವುದೇ ಸುಳಿವು ನಮಗೆ ಸಿಕ್ಕಿಲ್ಲ ಅಂದರೆ ಕೊಲೆಗಾರ ಯಾರೋ ಹತ್ತಿರದ ವ್ಯಕ್ತಿ ಆಗಿರೋ ಸಂಭವ ಜಾಸ್ತಿ ಇರುತ್ತೆ, ಸದ್ಯಕ್ಕೆ ನಮ್ಮ ಅನುಮಾನ ಎಲ್ಲ ಭಾರ್ಗವ್ ನಾರಾಯಣ್ ಮೇಲೆ ಇತ್ತು ಅವರು ಅದೆ ಕಾಲೇಜ್ ಅಲ್ಲಿ senior proffesor ಆಗಿದ್ದರು, ಅವರು ನಮ್ಮ ಯಾವ ಫೋನ್ recieve ಮಾಡ್ತಾ ಇಲ್ಲ,  ಎಲ್ಲಿ ಇದರೊ ಯಾರಿಗೂ ಗೊತ್ತಿಲ್ಲ, ಭರತ್ ಕುಮಾರ್ call list ಅಲ್ಲಿ ಅವರ ಹೆಸರು ತುಂಬಾ ಸರಿ ಇತ್ತು , ಆದರೆ ಕೊಲೆ ಆದ ದಿನದಿಂದ ಮನೆಗೆ ಬಂದಿಲ್ಲ ಮನೆಯೋರು ಅವರನ್ನ ಹುಡುಕುತ ಇದಾರೆ ನಮ್ಮ ಪ್ರಶ್ನೆಗೆ ಉತ್ತರ ಅವರೇ ಕೊಡೋಕೆ ಸಾಧ್ಯ.
     
        ಕಾಲೇಜ್ ಗೆ ಹೋದಾಗ ಗುಮಾಸ್ತ ಚನ್ನಪ್ಪ ಹೇಳಿದ್ದು  "ಗಿರಿ ಭರತ್ ಸರ್ ನ ನೋಡೋಕೆ ತುಂಬಾ ಸರಿ ಬರ್ತಾ ಇದ್ದ, ಅವನಿಗೆ ಅಮೇರಿಕಾ ಹೋಗೋಕೆ ಅದೇನೋ scholarship ಸಿಕ್ಕಿತ್ತು ಅದುಕ್ಕೆ ಅವರ ಹತ್ತಿರ ತುಂಬಾ ಸರಿ ಬರ್ತಾ ಇದ್ದ, ನಾನು ಅವತ್ತು ಕದ್ದಿ ಕೇಳಿಸಿ ಕೊಂಡಿದ್ದೆ  ೯ಕ್ಕೆ ಅವರು ಅವನನ್ನ ಕರದಿದ್ದು ದುಡ್ಡು ಇಸ್ಕೊಳೋಕೆ ನನಗೆ ಗೊತ್ತಿರೋ ಪ್ರಕಾರ ಅವನ ಹತ್ತಿರ ಅವರು ಏನಿಲ್ಲ ಅಂದರು ಒಂದು ಲಕ್ಷ ಲಂಚ ಕೇಳಿದ್ದರು"    

                 ತಕ್ಷಣ ಅವನ ಮನೆಗೆ ಹೊರಟ್ವಿ, ಅವನು ಮನೆ ಆಚೆ ಸಣ್ಣ ಮಕ್ಕಳ ಜೊತೆ ಆಡುತ ಇದ್ದ, ಆ ಮುಗ್ಧತೆ, ಸರಳತೆ ಇವನ ಹತ್ತಿರ ದುಡ್ಡು ಕೇಳೋಕೆ ಆ ಪ್ರಿನ್ಸಿಪಾಲ್ಗೆ ಹೇಗೆ ಮನಸ್ಸು ಆಯಿತೋ ಅನಿಸಿತು. ನನಗೆ ಅನುಮಾನ ಬಂದು ಅವನ ಮೇಲೆ ಕೇಸ್ ಹಾಕಿ ಕ್ಲೋಸ್ ಮಾಡೋ ಪರಿಕಲ್ಪನೆಯಲ್ಲಿ ತೆರಳಿದ್ದೆ ಆದರೆ ಆ ವಾತಾವರಣ ನನ್ನ ತಡಿತು.

      "ನೀನು ಯಾಕೆ ಅವತ್ತು ಅವರ ಮನೆಗೆ ಹೋಗಿದ್ದೆ ಗಿರಿ?"

 "ನೀವು collegeಗೆ ಹೋಗಿದ್ದರಿ ಅನಿಸುತ್ತೆ ನಿಮ್ಮ ಪ್ರಶ್ನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಇದೆ, ಸರ್ ನೀವು ಕೇಳಿದ್ದು ನಿಜಾನೆ ನಾನು ಅವತ್ತು ಅವರಿಗೆ ಒಂದು ಲಕ್ಷ ಲಂಚ ಕೊಡೋಕೆ ಹೋಗಿದ್ದೆ, ಸರ್ EMPH  ಅಂತ new jersey ಅಲ್ಲಿ ಬಹಳ ದೊಡ್ಡ academy ಅವರು ಪ್ರತಿ ಸರಿ ಭಾರತ ಇಂದ ೨೦ ಜನ ಅಂಗವಿಕಲರನ್ನ select ಮಾಡಿ ಅವರಿಗೆ scholarship ಕೊಟ್ಟು,  ಅವರ institution ಅಲ್ಲಿ training ಕೊಟ್ಟು  ನಮಗೆ ದೊಡ್ಡ oppurtunities ಅನ್ನು ಕಲ್ಪಿಸಿ ಕೊಡ್ತಾರೆ, ಎಷ್ಟೋ ಲಕ್ಷ ಜನದಲ್ಲಿ select ಆದ ೨೦ರಲ್ಲಿ ನಾನು ಒಬ್ಬ, ನಾನು english literature and creative writingಗೆ select ಆಗಿದ್ದು ಆದರೆ ಕಾಲೇಜ್ ಇಂದ degree completion letter ಬೇಕು , ಅದು ಅಷ್ಟು ಬೇಗ ಸಿಗೋಲ್ಲ ಬೇಗ ಬೇಕು ಅಂದರೆ ದುಡ್ಡು ಕೊಡಬೇಕು , principal ಸರ್ ಗೆ ದುಡ್ಡಿನ ಮೇಲೆ ಬಹಳ ಹಂಬಲ ಇತ್ತು ಅವರು ಎಲ್ಲ ಮಕ್ಕಳ ಹತ್ತಿರ ದುಡ್ಡು ಕೀಳ್ತಾ ಇದ್ದರು,  ಅವರು  ನನ್ನ ವಿಷಯ ದಲ್ಲಿ ಕರುಣೆ ತೋರಿಸ್ತಾರೆ ಅಂದುಕೊಂಡಿದ್ದೆ ಆದರೆ ಅವರು ನನ್ನ ಮೇಲೆ ಸ್ವಲ್ಪ ಜಾಸ್ತಿನೆ ತೋರಿಸಿದರು , ನನಗೆ ಎಲ್ಲ ನನ್ನ ಅಕ್ಕನೆ ತಂದೆ ತಾಯಿ ಯಾರು ಇಲ್ಲ , ಅಲ್ಲಿ ಒಂದು ವರ್ಷ ಇದ್ದು ಇಲ್ಲಿ ಯಾವುದಾದರು ಒಳ್ಳೆ ಕೆಲಸಕ್ಕೆ ಸೇರಿ, ಅಕ್ಕಂಗೆ ಒಳ್ಳೆ ಗಂಡು ನೋಡಿ ಮದುವೆ ಮಾಡಿಸೋ ಆಸೆ, ಅವಳು garments ಫ್ಯಾಕ್ಟರಿ ಅಲ್ಲಿ ಕೆಲಸ ಮಾಡ್ತಾಳೆ ಅದುಕ್ಕೆ ಸಾಲ ಮಾಡಿ ಅವರಿಗೆ ದುಡ್ಡು ಕೊಡಲು ಹೋಗಿದ್ದೆ ಅವತ್ತು, ಇವಾಗ ಅವರು ಇಲ್ಲ ನನಗೆ ಕಾಲೇಜ್ ಇಂದ  letter  ಸಿಗತ್ತೋ ಇಲ್ಲವೋ ಗೊತ್ತಿಲ್ಲ"

   "ಗಿರಿ ನೀನು ಒಂದು ಕೆಲಸ ಮಾಡು ನಾಳೆ ಹೋಗಿ ನಿಮ್ಮ vice ಪ್ರಿನ್ಸಿಪಾಲ ಅವರನ್ನ ನೋಡು, ನಾನು ಅವರಿಗೆ ಎಲ್ಲ ಹೇಳಿ ನಿನ್ನ ಕಾಲೇಜ್ ಯಿಂದ ಲೆಟರ್ ಕೊಡೋಕೆ ಅವರಿಗೆ ಹೇಳಿರ್ತೀನಿ, ಏನು ಚಿಂತೆ ಮಾಡಬೇಡ"

 "ತುಂಬಾ thanks ಸರ್  ನನ್ನ ನಂಬಿದಕ್ಕೆ, ನಾವು ಎಲ್ಲರ ಥರ ಇರೋಕೆ ಇಷ್ಟ ಪಡ್ತೀವಿ ಎಲ್ಲರ ತರ  ಕನುಸು ಕಾಣುತೀವಿ ಅದುನ್ನ ಪೋಷಿಸೋರುಗಿಂತ ನೀರು ಯೆರಚೋರೆ ಜಾಸ್ತಿ ನಿಮ್ಮ ಉಪಕಾರ ಯಾವತ್ತು ಮರೆಯೋಲ್ಲ "

"ಏನು ಪದ್ಯ , ಕಥೆ ಎಲ್ಲ ಬರೀತಿಯಾ?"

"ಅಷ್ಟೇ ಅಲ್ಲ ಸರ್ articles, journels, scripts ಕೂಡ ಬರೀತೀನಿ , ನಾನು ಬರೆದ ಒಂದು ಪದ್ಯ ಅವರಿಗೆ ತುಂಬಾ ಇಷ್ಟ ಆಗಿತ್ತು.... "

"ಯಾವುದದು ತೋರಿಸು ನೋಡೋಣ "

A bird lay it's eggs on the nest try to keep it 
safe and free 
Those eggs turns out be a tasty food for the snake 
Which lies beside the tree 
Seeing only the empty nest a bird will be in Vain 
It shatters it wings, shakes it head but can't express the pain 

A snake lives in a small caves of rock 
with all its small one 
An eagle searching for the food picks 
the child when there is no one 
A Snake coming after search of food finds none of its child 
It sees up the sky 
It looks around, Up and down, it crawl faster as long it can 
But to find it's child it can't fly 

A mother knows pain of delivery 
A father knows pain of getting right salary 
A greedy knows pain of hungry 
A rich knows pain in pressure and getting angry 

Being a human with all super sense we can express our pain 
Which can give some nourishment 
But pain is a pain for all creatures express it or not 
To a heart its always punishment.........


"ಚೆನಾಗಿದೆ, ಬಹಳ ಚೆನಾಗಿದೆ, ಕನ್ನಡದಲ್ಲಿ ಬರೆಯೋಲ್ವ?"

"ಬರೀತೀನಿ ಆದರೆ ಕಡಿಮೆ"

"ಸರಿ ಗಿರಿ ಬರ್ತೀನಿ, ಮತ್ತೆ ಏನಾದರೂ ತೊಂದರೆ ಆದರೆ ನನಗೆ ತಿಳಿಸು"

ಗೋವಿಂದಣ್ಣ:"ನೀವು ಬಿಡಿ ಸರ್ ದೊಡ್ಡ ಮನಸು ನಿಮ್ಮದು ಯಾರದ್ರು ಕಷ್ಟದಲ್ಲಿ ಇದ್ದರೆ ಏನಾದರೂ ಸಹಾಯ ಮಾಡದೇ ಸುಮ್ಮನೆ ಇರೋಲ್ಲ . ಮತ್ತೆ ಆ ಭಾರ್ಗವ್ ನಾರಾಯಣ್ ಅವರು ಸಿಕ್ಕಿದರ"

"ಹೊಂ ಸಿಕ್ಕಿದರು ಆದರೆ ಹೆಣವಾಗಿ"

ಗೋವಿಂದಣ್ಣ:"ಏನು!!! ಕೊಲೆ ಆದರಾ?"
   
             ಚಿಕ್ಕಮಗಳೂರು  ಹತ್ತಿರ ದೇವರಮನೆ ಅನ್ನೋ ಊರು ಹತ್ತಿರ ಅವರ ಹೆಣ ಸಿಕ್ಕಿತು, ಎಲ್ಲ investigation reports ಪ್ರಕಾರ ಅವರಿಗೆ ತಗಲಿದ್ದ ಗುಂಡು ನಾಲ್ಕು ವರ್ಷ ಹಿಂದೆ ನಡೆದ ಒಂದು ಕೊಲೆಯಲ್ಲಿ fire ಆದ ಗುಂಡಿಗು match ಆಗ್ತಾ ಇತ್ತು, ಆ ಕೇಸ್ ಶಮಿ ಭೈಯ್ ಗೆ ಸಂಭಂದ ಪಟ್ಟಿದು ಆಗಿತ್ತು, ನಂತರ furher investigation ಮಾಡಿದಮೇಲೆ ಅವರ ಗ್ಯಾಂಗ್ ನ ಒಬ್ಬ ಸಹಚರನ ಪ್ರಕಾರ, ಭಾರ್ಗವ್ ನಾರಾಯಣ್ ಶಮಿ ಭಾಯಿ ಗೋಸ್ಕರ drugs deal ಅಲ್ಲಿ ಕೆಲಸ ಮಾಡ್ತಾ ಇದ್ದರು.  ಯಾರೋ ಶಮಿ ಭೈಯ್ ಗೆ unknown ಕಾಲ್ ಮಾಡಿ  ಭಾರ್ಗವ್ ಅವರು ಪೋಲಿಸ್ ಗೆ ಎಲ್ಲ ವಿಷಯ leak ಮಾಡಿದಾರೆ ಅಂತ ಹೇಳ್ತಾರೆ ಜೊತೆಗೆ  ಸಂಬಂಧ ಪಟ್ಟ ಫೋಟೋ ಕೂಡ mail ಮಾಡಿದಾರೆ, ಅದುಕ್ಕೆ ಭಾರ್ಗವ್ ಅವರು ತಲೆ ಮರಿಸಿಕೊಂಡಿದ್ದು, ಆದರು ಹುಡುಕಿ ಅವರನ್ನ ಕೊಂದಿದ್ದಾರೆ .

 ಗೋವಿಂದಣ್ಣ:"ಅಂದರೆ ಭರತ್ ಅವರನ್ನ ಕೊಲೆ ಮಾಡಿದ್ದೂ ಶಮಿ ಭೈಯ್ ನ?"

        ಮೊದಲಿಗೆ ನಾವು ಹಾಗೆ ಅಂದುಕೊಂಡಿದ್ದವಿ  ಆದರೆ ಆಮೇಲೆ ಕಚಿತವಾಗಿ ಗೊತ್ತಾಗಿದ್ದು ಶಮಿಗೆ ಈ ವಿಷ್ಯ  ಮಾರ್ಚ್ ೧೪ಕ್ಕೆ ಗೊತ್ತಾಗುತ್ತೆ, ಆದರೆ ಈ ಕೊಲೆ ಆಗಿದ್ದು ೧೨ಕ್ಕೆ ಮತ್ತೆ ನಮ್ಮ ಒಬ್ಬ informer ಪ್ರಕಾರ, ಶಮಿ ಕಡೆಯೋರು ಯಾರು ಅವತ್ತು ಅಂದರೆ ೧೨ನೆ ತಾರೀಕು ಬೆಂಗಳೂರು ಅಲ್ಲಿ ಇರಲಿಲ್ಲ ಎಲ್ಲರೂ ಮುಂಬೈ ಗೆ ಯಾವದೋ ಕೆಲಸದ ಮೇಲೆ ಹೋಗಿದ್ದರು, ನಾವು ಗಿರಿ ಹೇಳಿದನ್ನ ಪರಿಗಣಿಸಿ ಭಾರ್ಗವ್ ಅವರ ಮನೆಯಿಂದ ಅವರು ಇದ್ದ ಕೆಲುವು function cd ಗಳನ್ನ ತರಿಸಿ ಅವರ ನಗುವನ್ನು ರೆಕಾರ್ಡ್ ಮಾಡಿ ಗಿರಿಗೆ  ಕೇಳಿಸಿದರೆ ನನ್ನ ಅನುಮಾನ ನಿಜ ಆಗುತ್ತೆ, ಅವನು ಅವತ್ತು ಅದೆ ನಗು ಕೇಳಿರ್ತಾನೆ

ಗೋವಿಂದಣ್ಣ:"ಅಂದರೆ ನೀವು ಬರಿ ಆ ಗಿರಿ ಹೇಳಿದ್ದು ಕೇಳಿ ಭಾರ್ಗವ್ ಅವರೆ ಕೊಲೆಗಾರ ಅಂತ decide ಮಾಡಿದರಾ .. ಸರ್ ಯಾರು ಕೊಲೆ ಮಾಡಿ ನಗ್ತಾರೆ? ಯಾಕೆ  ಭಾರ್ಗವ್ ಅವರು ಕೊಲೆ ಮಾಡಿದ್ದರು?"
 
"ನನಗು ಅದೆ ಪ್ರಶ್ನೆ ತಲೆಯಲ್ಲಿ  ಓಡ್ತಾ ಇತ್ತು, ನಾನು ಇದರ ಬಗ್ಗೆನೆ ಯೋಚನೆ ಮಾಡ್ತಾ ಬೇರೆ ಕೇಸ್ ಮೇಲೆ ಗಮನ ಸರಿಯಾಗಿ ವಹಿಸೋಕೆ ಆಗದೆ ೧೫ ದಿನ ಕಳೆದೆ"

ಗೋವಿಂದಣ್ಣ:"ಅದುಕ್ಕೆನಾ ನೀವು ಒಂದು ತರ ಇರೋದು ಹೋದ ವಾರ ಇಂದ?"

"ಹೋದ ಶುಕ್ರವಾರ ಇಂದ ಸರಿಯಾಗಿ ಹೇಳ ಬೇಕಾದರೆ"

ಗೋವಿಂದಣ್ಣ:"ಯಾಕೆ ಸರ್ ಏನು ಆಯ್ತು?"

                                   ಅವತ್ತು ಸುಮಾರು ಸಂಜೆ ೪ ಗಂಟೆಗೆ  ಗಿರಿ station ಗೆ ಬರ್ತಾನೆ, ಅವನು ಅವತ್ತು ಅಮೆರಿಕಾಗೆ ಹೊರಡೋಗಿಂತ ಮುಂಚೆ ನನ್ನ ಒಂದು ಸರಿ ನೋಡಿ ಹೋಗೋಕೆ.

ಗೋವಿಂದಣ್ಣ:"ಹೌದು ನನಗೆ ಗೊತ್ತು ನಾನು ಇದ್ದನಲ್ಲ"

        ಅವನನ್ನ ನೋಡಿ ಕುಷಿ ಆಗುತ್ತೆ ಜೊತೆಗೆ ಅವರ ಅಕ್ಕ ಕೂಡ ಬಂದಿರ್ತಾಳೆ, ಕೊನೆಗು ಅವನು ಗುರಿ ಮುಟ್ಟೋಕೆ ಎಲ್ಲ ತಯಾರಾಗಿರ್ತಾನೆ.

 "ಸರ್  ನಿಮ್ಮಿಂದ ನನಗೆ ಕೊನೆಗೂ  ಬೆಳಕನ್ನ ನೋಡೋ ಅವಕಾಶ ಸಿಕ್ಕಿದೆ, ನಿಮಗೆ ಎಷ್ಟು thanks ಹೇಳಿದರು ಸಾಲದು ಅದುಕ್ಕೆ ನನ್ನಿಂದ ನಿಮಗೆ ಪುಟ್ಟ ನೆನೆಪಿನ ಕಾಣಿಕೆ, ಈ ಗೊಂಬೆ ನನ್ನ ತುಂಬಾ ಒಳ್ಳೆ ಸ್ನೇಹಿತ ಇದು ನನಗೆ ಬಹಳ ಸಹಾಯ ಮಾಡಿದೆ, ಇದು ಹೇಗೆ ಕಾಣುತ್ತೆ ನನಗೆ ಗೊತ್ತಿಲ್ಲ ಅದುಕ್ಕೆ ಏನೆ ನೋವು ಇರಲಿ,ಏನೆ ಕಷ್ಟ ಇರಲಿ ಇದನ್ನ ಕಿವಿ ಹತ್ತಿರ ತಂದು ಒಂದು ಸರಿ ಅಲ್ಲಾಡಿಸಿದರೆ ಅದರ ಶಬ್ದ ಮನಸಿನ ಎಲ್ಲ ಭಾರ ಇಳಿಸುತಿತ್ತು , ಇದರಿಂದ ಎಲ್ಲ ಪ್ರಶ್ನೆಗು ಉತ್ತರಾನು ಸಿಗುತ್ತೆ."

"ತುಂಬಾ ಥ್ಯಾಂಕ್ಸ್ and  all  the best for your future"

              
    ಗೋವಿಂದಣ್ಣ:"ಅವನು ೫ ಗಂಟೆ ಸುಮಾರು ಹೊರಟು ಹೋದ ಆಲ್ವಾ, ಎಂಟು ಗಂಟೆಗೆ flight ಇದೆ ಅಂತ ಹೇಳ್ತಾ ಇದ್ದ "

        ಹೌದು ನಾನು ನನ್ನ ಪಾಡಿಗೆ reports study ಮಾಡ್ತಾ ಇದ್ದೆ, ಅವಾಗ ಅವನು  ಕೊಟ್ಟ ಗೊಂಬೆ ಮೇಲೆ ಗಮನ ಹೋಯ್ತು ಅವನು ಹೇಳಿದ್ದು ನೆನಪಿತ್ತು ಕೀವಿ ಹತ್ತಿರ ಇಟ್ಟು ಅಲ್ಲಾಡಿಸಿದೆ ಒಳಗಡೆ ಏನೋ ಇತ್ತು ಅದರ ಶಬ್ದ ಅಷ್ಟೆ, ತಕ್ಷಣ ನನಗೆ ಏನೋ ಹೊಳಿತು ಅವನು ಹೇಳಿದ್ದು "ಎಲ್ಲ ಪ್ರಶ್ನೆಗೂ ಉತ್ತರ ಸಿಗುತ್ತೆ", ಆ ಗೊಂಬೆ normal rubber plasticದು  ಆಗಿತ್ತು  ಅದರ ಕೆಳಗೆ ರಂದರ ಇತ್ತು ಬೇಕಂತ ಮಾಡಿ ಒಳಗೆ ಏನೋ ಇಟ್ಟ ಹಾಗೆ, ಗೊಂಬೆ ಪೂರ್ತಿ ಹರಿದು ಒಳಗೆ ನೋಡಿದರೆ ಎರಡು ಕಾಗದ ಇತ್ತು ಒಂದು ಕಾಗದ ಮೇಲೆ ಒಂದು, ಇನ್ನೊಂದರ ಮೇಲೆ ಎರಡು ಅಂತ ಬರದಿತ್ತು.       
  
                                                               ಒಂದು
"ಸರ್ ಸತ್ಯ ಬರಿ ಕಹಿ ಅಷ್ಟೆ ಅಲ್ಲ ಅದು ಬೆಂಕಿ ಇದ್ದ ಹಾಗೆ, ಒಂದು ಮನೆಯನ್ನು ಕೂಡ ಸುಟ್ಟು ಬಿಡಬೋಹುದು, ನಿಮಗೆ ಆದರು ನಾನು ಒಂದು ಸತ್ಯ ಹೇಳಲೇ ಬೇಕು ಅವತ್ತು ರಾತ್ರಿ  ಭರತ್ ಕುಮಾರ್ ಅವರು ಕರದಿದ್ದು ನನ್ನ ಅಲ್ಲ ಸರ್ ನನ್ನ ಅಕ್ಕನನ್ನ ಅವರು ಕೇಳಿದ್ದು ೨ ಲಕ್ಷ ಅದುಕ್ಕೆ ನಮ್ಮ ಅಕ್ಕ ಅವರನ್ನ ಕೇಳೋಕೆ ಅಂತ ಕಾಲೇಜ್ ಗೆ ಬಂದಿದ್ದಳು, ಹೇಗಾದರೂ ಮಾಡಿ ಒಂದು ಲಕ್ಷ ಹೊಂದಿಸಿ ಕೊಡ್ತೀವಿ ದಯವಿಟ್ಟು permission  ಕೊಡಿ ಅಂತ ಕೇಳಿದಳು, ಅದುಕ್ಕೆ ಅವರು ಸರಿ ಒಂದು ಲಕ್ಷ ಕೊಡು ಆ ಒಂದು ಲಕ್ಷ ತಗೊಂಡು ನಮ್ಮ ಮನೆಗೆ ನೀನೆ ಬಾ, ಒಂದು ರಾತ್ರಿ ಇರು ಅಂತ ಕೇಳಿದರು ತಮ್ಮನಿಗಿಂತ ತನ್ನ ಶೀಲ ಮುಖ್ಯ ಅಲ್ಲ ಅಂತ ನಮ್ಮ ಅಕ್ಕ ಒಪ್ಕೊಂಡಳು. ಆದರೆ ಈ ವಿಷಯ ನನಗೆ ಗೊತ್ತಾಗಿ ನಾನು ಅವಳನ್ನ ತಡೆದು, ಕೊನೆಗೆ ನಾನೆ ಒಂದು ಲಕ್ಷ ತಗೊಂಡು ಹೊರಟೆ ಹೇಗಾದರೂ ಮಾಡಿ ಅವರನ್ನ ಒಪ್ಪಿಸೋಣವಂತ, ಇವಾಗ ಅದು ಮುಗಿದು ಹೋದ ಕಥೆ ಆದರು ಅವರು ಎಂಥ ಮನುಷ್ಯ ಅಂತ ನಿಮಗೆ ಗೊತ್ತಾಗಲಿ ಅಂತ ಇವಾಗ ಹೇಳಿದೆ. ನಿಮಗೋಸ್ಕರ ಒಂದು ಪದ್ಯ ಬರಿದಿದಿನಿ ಓದಿ ಸರ್ ಎರಡನೆ ಪುಟದಲ್ಲಿ ಇದೆ"

ಗೋವಿಂದಣ್ಣ:"ಪದ್ಯ ಇನ್ನು ನೆನಪಿದೆನಾ?"

"ಅದು ಮರೆಯೋ ಅಂತ ಪದ್ಯ ಅಲ್ಲ"

ಗೋವಿಂದಣ್ಣ:"ಹೇಳ್ತೀರಾ  ಮೊದಲನೇ ಸರಿ ಓದಿದಾಗ ಅರ್ಥ ಆಗಲಿಲ್ಲ"


           "ಕತ್ತಲು ಕವಿಯಲು ಸುತ್ತಲು ಅರಳಲು,
          ತತ್ತರ ಅದೆನು ನಾನು.............
     
          ಉತ್ತರ ಹುಡುಕುತ ಸುತ್ತಲು ತಿರುಗಲು
          ದೊರಕಲು ಕೇವಲು ಭೀತಿ.
          ಕನಸನ್ನು ತುಳಿದು, ಆಸೆಗೆ ಮಣ್ಣನು ಮಸೆದು
          ದುಬಾರಿ ಆಯಿತು ನೀತಿ.....

          ಕತ್ತಲು ಕವಿಯಲು ಸುತ್ತಲು ಅರಳಲು,
          ತತ್ತರ ಅದೆನು ನಾನು.............
          ನೆತ್ತರು ಹರಿಸಲು, ಕತ್ತಿಯ ಮಸಿಯಲು,
          ಎರಡು ಕೈ ಸಾಲದು ಏನು?........."


      ಈ ಪದ್ಯನ ಹಿಡ್ಕೊಂಡು ಹೊರಗೆ ಓಡಿದೆ ಪುಟ್ಟಣ್ಣಗೆ ಗಾಡಿ ತೆಗಿಯೋಕೆ ಹೇಳಿದೆ ಆದರೆ ಮೇಲೆ ಒಂದು ವಿಮಾನ ಹಾಗೆ ಹಾರಿ ಹೋಯ್ತು, ತುಂಬಾ ದೂರದಲ್ಲಿ ಇತ್ತು  ಚಿಕ್ಕದಾಗಿ ಕಾಣ್ತಾ ಇತ್ತು, ನಾನು ಹಾಗೆ ನೋಡ್ತಾ ಅಲ್ಲೇ ನಿಂತೇ.... ಇವಾಗ ಅರ್ಥ ಆಯ್ತಾ ?

ಗೋವಿಂದಣ್ಣ:"ಹೊಂ!!! ಅವನಿಗೆ ಕಣ್ಣು ಇರಲಿಲ್ಲ ಆದರೆ ದೇವರು ಬುದ್ದಿವಂತಿಕೆ ಬಹಳ ಚೆನ್ನಾಗೇ ಕೊಟ್ಟಿದ್ದಾ,ಎಷ್ಟೋ ಲಕ್ಷ ಜನದಲ್ಲಿ ಇವನೊಬ್ಬ select ಆಗಿರೋದು ದೊಡ್ಡ ವಿಷಯ ಅಲ್ಲ ಬಿಡಿ, ಯಾವಾಗ ಹೋಗ್ತಾ ಇರೋದು ಧರ್ಮಸ್ಥಳಕ್ಕೆ?"

"ನಾಳೆ ಬೆಳಿಗ್ಗೆ 5ಕ್ಕೆ ಬಿಡ್ತೀವಿ"

ಗೋವಿಂದಣ್ಣ:"Happy Journey ಸರ್!!! ಆರಾಮಾಗಿ family, ಮಕ್ಕಳ ಜೊತೆ enjoy ಮಾಡಿ ಬನ್ನಿ, ಹಾಗೆ ಹುಂಡಿ ಅಲ್ಲಿ ನನ್ನ ಹೆಸರಲ್ಲಿ ನೂರು ರೊಪಾಯಿ ಹಾಕಿ, ಬರ್ತಾ ಪ್ರಸಾದ ತಗೊಂಡು ಬನ್ನಿ!!!"

                                           ಮುಕ್ತಾಯ!!!           




Sunday 8 November 2015

Ganeshgudi days

Episode-1

                                          Shahstri and friends...


     

  (Inside classroom of 7th std, Model Primary School)
“Swati do you know that Shastri, yesterday he hugged that bad luck tree its seems and everyone ran after seeing that?”
“Shilpa are you serious? That too we are sitting behind him and you are telling now, come let’s move the bench bit backwards we should maintain distance”
“Swati !!!Shilpa !!! come lets go to play its 4:00 even teacher gave the permission”

(Everyone run towards the ground)

(Manju telling his fellowmates in the ground )

“Hey see there bad luck Shastri don’t touch him, don’t take him in the team. Hey you go and sit in class don’t come to play with us”

“Manju what I have done wrong I just hugged it to show you nothing will happen, its also a normal tree like others”

“No its not,  once a guy touched it and bad luck followed him and he became devil and ate all his friends”

(Swamy who was Shastri’s best friend interferes saying)

“Manju its all an rumor it has never happened”

“Swami I know u r his best friend, but from now you be away from him”

Shastri
: “Swami its ok I will go to class you guys play!!!!”

“Oh!!!no it started raining see Swamy its all because of Shastri now no one cant play come lets go to class and this has happened for 3rd time whenever he comes to play its starts raining”


(Shastri going alone to home from School after when School is left)
Swami runs towards him and stops Shastri
“Shastri why cant you stop when I am calling you?”

“Swami go away if they see you with me, you will also be treated bad like me!!!!”

“Let them see, its all hoax and one day for sure they will come to know about that, I don’t understand why other our friends believe Manju whatever he says even Swati and Shilpa, we used to play together but still…...”

“Swami now what to do?”

“Don’t worry I will find a way…..”

(Next day morning shastri getting ready for School)

“Amma(mom) where is English notes I cant see them, I am getting late”

(Shastri’s father in anger)
“You should search and keep it yesterday before sleeping idiot now you are searching at last moment daily how many times should I tell you are not a small kid!!!!!”

(Shastri’s mother comes in hurry)
“Its here I got it you go and have your breakfast I will dress him up you are getting late for office. Shastri daily how many times you will get scolding from your father? Try to be god boy no, ok go and have breakfast fast its already late”

TV Reporter on the news
“This Time Karnataka has witnessed low amount of rain, which has affected north part a lot causing a severe damage to the farmers and even affected in the production of Electricity, around 300 farmers have lost there life government is still acting like nothing has happened, If rain doesn’t shows up this year then people of Karnataka has to suffer lot”

“Amma buy I am going to school!!”

“Hey Shastri wait it may rain today take umbrella and go!!!!”

“Amma you know what whenever I take Umbrella and go it will not rain, if I didn’t it will rain, Let it rain, Let it rain…”

“Shalini(Shastri’s Mom)  what you are doing standing near gate I am not able find my Office files here!!!!”

(Shalini whispering within herself)
“I am seeing my son, My son !!!”

    


Tuesday 1 September 2015

Topper

Topper

Daddy says"My boy u should be the topper",
He cant give me even an reasonable offer
Take 98 or 99 you should be first
I don't care what u do,how much do u suffer

U want to say all ur colleague
"My son is number one"
My marks can give you happiness
but not your son 

U wake me up at 5am, 
insists me to study
U don't bother what i am,
what i want to be.

Marks is just a number
its not an symbol of Excellence
I want you to understand me
in my life i want ur Presence

Hey dad don't care about the people
what they think about you
YOU ARE MY DAD AND I AM UR CHILD
YOU WANT ME AND I WANT YOU.





The Break Up

The break up

My heart was paralyzed, tears were in my eyes
When you said, I am leaving you
Don't know what to say, I'm still in shock 
finding what has happened and why
But you went away holding the hand of another guy

To shine always, my heart was not of gold or silver
now anger and hate are also feelings that I have
If this is the reason I would have changed, to be better only for you, my love
But you went away holding the hand of another man

My heart was like a desert, you were the furtile rain 
now you have left me, what stays is only pain
But I am still waiting  standing in front of this door
knowing you will never come again
It seems you are happy in the arms of another man

For this kind of pain in my heart, there is no surgery
my heart is broken now, still I think of you as an angel
I want to start to write, to tell about our love story
imagining my life without you, I can't even hold my pen straight
But you're are happy in the arms of another man

I admit my mistakes, I want to convince you
but what's the use of taking a ticket on a departed train 
somewhere in my heart there is relief and happiness for you
Because you seem so happy in the arms of another man